alex Certify ಈಜಲು ಹೋದವನ ಮೇಲೆರಗಿದ ಮೊಸಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಜಲು ಹೋದವನ ಮೇಲೆರಗಿದ ಮೊಸಳೆ..!

ಮೊಸಳೆಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖೀಮ್​ಪುರ ಎಂಬಲ್ಲಿ ವರದಿಯಾಗಿದೆ.

ಮದುವೆ ಕಾರ್ಯಕ್ರಮಕ್ಕೆಂದು 32 ವರ್ಷದ ರಾಹತ್​ ಅಲಿ ಬನ್ಸಿನಗರ್​ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾಲುವೆ ಬಳಿ ಈಜಲು ಹೋಗಿದ್ದ ವೇಳೆ ಮೊಸಳೆ ರಾಹತ್​ರನ್ನ ಎಳೆಯಲು ಯತ್ನಿಸಿದೆ.

ಇದ್ದಕ್ಕಿದ್ದಂತೆ ಬಂದ ಮೊಸಳೆಯು ಹಿಂಬದಿಯಿಂದ ನನ್ನನ್ನ ಎಳೆಯಲು ಯತ್ನಿಸಿತು ಎಂದು ಅಲಿ ರಕ್ಷಣಾ ಸಿಬ್ಬಂದಿ ಬಳಿ ಹೇಳಿಕೊಂಡಿದ್ದಾರೆ. ರಾಹತ್​ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಈ ವ್ಯಕ್ತಿಯ ಕಿರುಚಾಟ ಕೇಳುತ್ತಿದ್ದಂತೆಯೇ ಅಲ್ಲೇ ಸಮೀಪದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರು ಓಡಿ ಬಂದು ಮೊಸಳೆ ಬಾಯಿಯಿಂದ ರಾಹತ್​ರನ್ನ ಬಚಾವ್ ಮಾಡಿದ್ದಾರೆ,

ಕೂಡಲೇ ರಾಹತ್​ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿತರಾದರೂ ಮೊಸಳೆಯನ್ನ ಹುಡುಕಲು ಸಾಧ್ಯವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...