alex Certify ಕೊರೊನಾ ಕಾರಣಕ್ಕೆ ಜಗಳ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾರಣಕ್ಕೆ ಜಗಳ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

ಚೆನ್ನೈ : ಪತಿ-ಪತ್ನಿಯ ನಡುವೆ ಕೊರೊನಾ ಕಾರಣಕ್ಕೆ ಶುರುವಾದ ಜಗಳ ಇಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಚೆನ್ನೈನ ಮಹಾಬಲಂ ಎಂಬಲ್ಲಿ ಶುಕ್ರವಾರ ನಡೆದಿದೆ. ಮಣಿಕಂಠನ್(35), ರಾಧಿಕಾ(25) ಆತ್ಮಹತ್ಯೆಗೆ ಶರಣಾದ ದಂಪತಿ.

10 ತಿಂಗಳ ಹಿಂದೆ ಇಬ್ಬರ ವಿವಾಹವಾಗಿತ್ತು. ಮಣಿಕಂಠನ್ ಕೆಮಿಕಲ್ ಫ್ಯಾಕ್ಟರಿಯೊಂದರ ಉದ್ಯೋಗಿಯಾಗಿದ್ದ ರಾಧಿಕಾ ಕಿಲ್ಪೌಕ್‌ನಲ್ಲಿ ಉದ್ಯೋಗ ಮಾಡುತ್ತಿದ್ದಳು. ಇಷ್ಟು ದಿನ ಎಲ್ಲವೂ ಚೆನ್ನಾಗೇ ಇತ್ತು. ಎರಡು ತಿಂಗಳ ಹಿಂದೆ ಮಣಿಕಂಠನ್‌ಗೆ ಕೋವಿಡ್ ವಕ್ಕರಿಸಿಕೊಂಡಿತ್ತು. ಆತ ಚಿಕಿತ್ಸೆ ಪಡೆದು ಗುಣ ಹೊಂದಿದ್ದ. ಆದರೆ, ಈ ವಿಷಯವಾಗಿ ಮನೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.

ಇದೇ ಜಗಳ ತಾರಕಕ್ಕೆ ಹೋಗಿ 15 ದಿನಗಳ ಹಿಂದೆ ರಾಧಿಕಾ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಕಿಲ್ಪೌಕ್ ಮೆಡಿಕಲ್ ಕಾಲೇಜ್ ‌ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗುಣವಾಗಿ ಬಂದ ಆಕೆಯ ಜತೆ ಮತ್ತೆ ಮಣಿಕಂಠನ್ ಜಗಳವಾಡಿದ್ದ. ಶುಕ್ರವಾರ ಜಗಳವಾಡಿಕೊಂಡು ಮಣಿಕಂಠನ್ ಮನೆಯಿಂದ ಹೊರ ಹೋಗಿದ್ದ. ಆದರೆ, ರಾಧಿಕಾ ಮನೆಯಲ್ಲೇ ನೇಣು ಹಾಕಿಕೊಂಡಿದ್ದಳು. ಮನೆಗೆ ವಾಪಸಾದ ಪತಿ ಪತ್ನಿಯ ಪರಿಸ್ಥಿತಿ ನೋಡಿ ಆತನೂ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...