alex Certify ಮಾನವೀಯತೆ ಇನ್ನೂ ಇದೆ ಎಂಬುದನ್ನು ಸಾರುವ ವಿಡಿಯೋ ಶೇರ್‌ ಮಾಡಿದ ಸೆಹ್ವಾಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆ ಇನ್ನೂ ಇದೆ ಎಂಬುದನ್ನು ಸಾರುವ ವಿಡಿಯೋ ಶೇರ್‌ ಮಾಡಿದ ಸೆಹ್ವಾಗ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಜಗತ್ತಿನಲ್ಲಿ ಇನ್ನೂ ಮಾನವೀಯತೆ ಜೀವಂತವಾಗಿದೆ ಎಂಬ ಸಂದೇಶವನ್ನ ಸಾರುವ ವಿಡಿಯೋವೊಂದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ವಿಡಿಯೋದಲ್ಲಿ ತಳ್ಳು ಗಾಡಿಯಲ್ಲಿ ಫ್ಲೈ ಓವರ್​ ಮೇಲೆ ಸಾಗುತ್ತಿದ್ದ ಬಡ ದಂಪತಿಗೆ ಬೈಕ್​ ಸವಾರನೊಬ್ಬ ನೆರವಾಗಿದ್ದಾನೆ. ರಮ್ಮಿ ರೈಡರ್​ ಎಂದು ಯುಟ್ಯೂಬ್​ಗಳಲ್ಲಿ ಗುರುತಿಸಲ್ಪಟ್ಟ ಬೈಕ್​ ಸವಾರನೊಬ್ಬ ದಂಪತಿಗೆ ಸಹಾಯ ಮಾಡೋದಾಗಿ ಹೇಳಿದ್ದಾನೆ.

ಕೂಡಲೇ ಮಹಿಳೆ ತಳ್ಳು ಗಾಡಿಯ ಮುಂಭಾಗದಲ್ಲಿ ಕುಳಿತುಕೊಂಡಿದ್ದಾಳೆ. ಬೈಕ್​ ಸವಾರ ತನ್ನ ಕಾಲಿನಿಂದ ಗಾಡಿಯನ್ನ ತಳ್ಳುವ ಮೂಲಕ ದಂಪತಿಗೆ ನೆರವಾಗಿದ್ದಾನೆ.

ಮಾನವೀಯತೆ ಇನ್ನೂ ಜೀವಂತವಾಗಿದೆ..! ಬೈಕ್​ ಸವಾರ, ದಂಪತಿಯ ರಿಕ್ಷಾ ಚಲಾಯಿಸಲು ಸಹಾಯ ಮಾಡಿದ್ದಾನೆ ಎಂದು ವೀರೇಂದ್ರ ಸೆಹ್ವಾಗ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

— Virender Sehwag (@virendersehwag) January 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...