alex Certify ಕಲಿಯುಗ ಅಂತ್ಯವಾಯ್ತು ಅಂತಾ ಮಕ್ಕಳನ್ನ ಕೊಂದಿದ್ದ ತಾಯಿ ಶವದ ಮುಂದೆಯೇ ಮಾಡಿದ್ದಳಂತೆ ನೃತ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಿಯುಗ ಅಂತ್ಯವಾಯ್ತು ಅಂತಾ ಮಕ್ಕಳನ್ನ ಕೊಂದಿದ್ದ ತಾಯಿ ಶವದ ಮುಂದೆಯೇ ಮಾಡಿದ್ದಳಂತೆ ನೃತ್ಯ…!

ಕಲಿಯುಗ ಅಂತ್ಯವಾಗುತ್ತೆ ಎಂದು ನಂಬಿದ ಆಂಧ್ರ ಪ್ರದೇಶದ ಮದನಪಲ್ಲಿಯ ದಂಪತಿ ಇಬ್ಬರು ಹೆಣ್ಣುಮಕ್ಕಳನ ಕೊಂದ ಪ್ರಕರಣ ಸಂಚಲನವನ್ನೇ ಸೃಷ್ಟಿಸಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ತೆರಳಿದ ವೇಳೆಯಲ್ಲಿ ಪೋಷಕರಿಬ್ಬರು ತಮ್ಮ ಮಕ್ಕಳ ಶವದ ಮುಂದೆ ಕುಳಿತಿದ್ದರು ಎನ್ನಲಾಗಿದೆ.

ಮೃತ ಮಕ್ಕಳ ತಂದೆ ಪ್ರಾಂಶುಪಾಲ ಡಾ. ವಿ. ಪುರುಷೋತ್ತಮ ತಾಂತ್ರಿಕ ಪ್ರಭಾವದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಆದರೆ ಅವರ ಪತ್ನಿ ಪದ್ಮಾ ಮಾತ್ರ ಇನ್ನೂ ವಿಚಿತ್ರವಾಗಿಯೇ ವರ್ತಿಸುತ್ತಿದ್ದಾರೆ ಎಂದು ವರದಿಯಾಗಿದೆ.

30 ಸಾವಿರ ರೂ.ಗಾಗಿ ಕೊಲೆ ಮಾಡಿ ಜೈಲು ಸೇರಿದ ಕೋಟ್ಯಾಧಿಪತಿಯ ಪುತ್ರ..!

ತಾಯಿ ಪದ್ಮಜಾ ಮಾತ್ರ ತನ್ನ ಮಕ್ಕಳ ಶವದ ಎದುರು ಕುಳಿತು ಹಾಡು ಹಾಡುತ್ತಿದ್ದಳು ಹಾಗೂ ನೃತ್ಯ ಮಾಡುತ್ತಿದ್ದಳು ಎನ್ನಲಾಗಿದೆ. ಅಲ್ಲದೇ ಈಕೆ ಕೊರೊನಾ ವೈರಸ್​ ಚೀನಾದಿಂದ ಬಂದಿದ್ದಲ್ಲ ಬದಲಾಗಿ ಕಲಿಯುಗದಲ್ಲಿ ಕೆಟ್ಟ ಶಕ್ತಿಗಳನ್ನ ನಾಶ ಮಾಡಲು ದೇವರೇ ಇದನ್ನ ಸೃಷ್ಟಿ ಮಾಡಿದ್ದಾನೆ ಎಂದು ನಂಬಿದ್ದಾಳೆ.

ಪೊಲೀಸರು ಪದ್ಮಜಾರನ್ನ ಬಂಧಿಸಿ ಕೊರೊನಾ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವೇಳೆ ಈಕೆ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದ್ದಾಳೆ. ಮಾತ್ರವಲ್ಲದೇ ನಾನು ಮನುಷ್ಯನ ರೂಪದಲ್ಲಿರುವ ಕೊರೊನಾ ವೈರಸ್​. ನನಗೆ ಪರೀಕ್ಷೆಯ ಅಗತ್ಯವೇ ಇಲ್ಲ ಎಂದು ಕಿರುಚಿದ್ದಾಳಂತೆ.

ಭಾನುವಾರ ಪುರುಷೋತ್ತಮ ನಾಯ್ಡು ಹಾಗೂ ಪದ್ಮಜಾ ದಂಪತಿ ತಮ್ಮ ಇಬ್ಬರು ಹೆಣ್ಣುಮಕ್ಕಳಾದ 27 ವರ್ಷದ ಅಲೇಖ್ಯಾ ಹಾಗೂ 22 ವರ್ಷದ ಸಾಯಿ ದಿವ್ಯಾ ಎಂಬವರನ್ನ ಕೊಲೆ ಮಾಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...