alex Certify ʼಇಡ್ಲಿ ಅಮ್ಮʼನಿಗೆ ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹಿಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಇಡ್ಲಿ ಅಮ್ಮʼನಿಗೆ ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹಿಂದ್ರಾ

ಬರೀ ಒಂದು ರೂಪಾಯಿಗೆ ಒಂದರಂತೆ ಶುಚಿ-ರುಚಿಯಾದ ಇಡ್ಲಿ ಉಣಬಡಿಸುವ ಮೂಲಕ ನೆಟ್ಟಿಗರ ವಲಯದಲ್ಲಿ ’ಇಡ್ಲಿ ಅಮ್ಮ’ ಎಂದೇ ಫೇಮಸ್ ಆಗಿರುವ ಕೊಯಮತ್ತೂರಿನ ಕಮಲತಾಳ್‌ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹಿಂದ್ರಾ ಕಮಲತಾಳ್‌ರಿಗೆ ನೆರವಾಗುವುದಾಗಿ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.

ಕಮಲತಾಳ್‌ ಅವರಿಗೆ ಇಡ್ಲಿ ಮಾಡಲು ಅಡುಗೆ ಅನಿಲ ಸಂಪರ್ಕ ಒದಗಿಸಿರುವ ಆನಂದ್ ಮಹಿಂದ್ರಾ ನೇತೃತ್ವದ ಮಹಿಂದ್ರಾ ಸಮೂಹ, ಟಿನ್ ಶೆಡ್ ಒಂದರಲ್ಲಿ ನಡೆಸಲ್ಪಡುತ್ತಿದ್ದ ಅವರ ಪುಟ್ಟ ಹೊಟೇಲ್‌ಗೆ ಚೊಕ್ಕವಾದ ಕಟ್ಟಡವೊಂದನ್ನು ನಿರ್ಮಿಸಿಕೊಡಲು ಸಕಲ ಸಿದ್ಧತೆ ನಡೆಸಿದೆ. ಮನೆಯನ್ನೇ ಕೆಲಸದ ಜಾಗವನ್ನಾಗಿ ಮಾಡಿಕೊಳ್ಳುವಂತೆ ಪುಟ್ಟದೊಂದು ವ್ಯವಸ್ಥೆ ಬೇಕೆಂದು ಖುದ್ದು ಕಮಲತಾಳ್‌ರೇ ಹೇಳಿದ ಮೇಲೆ ಅವರ ಇಚ್ಛೆಯಂತೆಯೇ ವ್ಯವಸ್ಥೆ ಮಾಡಿಕೊಡಲು ತಂಡಮುತೂರ್‌ ನೋಂದಣಿ ಕಚೇರಿಯಲ್ಲಿ ಅನುಮತಿ ಪಡೆಯಲಾಗಿದೆ.

ಏಕಾಏಕಿ ಬಸ್‌ ಒಳಗೆ ತೂರಿ ಬಂದ ಜಿಂಕೆ….!

ಸೌದೆ ಒಲೆಯಲ್ಲಿ ಇಡ್ಲಿ ತಯಾರಿಸಿ ಜನರಿಗೆ ಉಣಬಡಿಸುತ್ತಿದ್ದ ಕಮಲತಾಳ್‌ ಲಾಭಕ್ಕಿಂತ ಹೆಚ್ಚಾಗಿ ಜನರ ಹೊಟ್ಟೆ ಹಸಿವು ನೀಗಿಸುವ ಕಾಯಕವನ್ನು ಪ್ರೀತಿಯಿಂದ ಮಾಡುತ್ತಿದ್ದರು. ಅವರ ಈ ಕಥೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಅವರಿಗೆ ಅಡುಗೆ ಅನಿಲದ ಸಂಪರ್ಕದ ಮಾತು ಕೊಟ್ಟಿದ್ದರು ಆನಂದ್ ಮಹಿಂದ್ರಾ.

“ಯಾರಾದರೊಬ್ಬರ ಸ್ಪೂರ್ತಿಯುತ ಕಥೆಯಲ್ಲಿ ಪುಟ್ಟದೊಂದು ಪಾತ್ರ ನಿರ್ವಹಿಸುವ ಅವಕಾಶ ಬಹಳ ಅಪರೂಪಕ್ಕೆ ಒಬ್ಬರಿಗೆ ಸಿಗುತ್ತದೆ. ತಮ್ಮ ಕಥೆಯಲ್ಲಿ ಪುಟ್ಟದೊಂದು ಪಾತ್ರ ನಿರ್ವಹಿಸಲು ಅವಕಾಶ ಕೊಟ್ಟ ಕಮಲತಾಳ್, ಇಡ್ಲಿ ಅಮ್ಮ, ಅವರಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇನೆ. ಅವರಿಗೆ ಶೀಘ್ರದಲ್ಲೇ ಮನೆ ಕಂ ಕೆಲಸದ ಜಾಗ ನಿರ್ಮಿಸಲಿದ್ದು ಅಲ್ಲಿ ಅವರು ಇಡ್ಲಿ ಮಾಡಿ ಮಾರಬಹುದಾಗಿದೆ” ಎಂದಿದ್ದಾರೆ ಮಹಿಂದ್ರಾ.

“ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಕಮಲತಾಳ್‌ ಅವರ ಕೆಲಸದ ಸಾರ್ಥಕ್ಯದ ಒಂದೇ ಒಂದು ಅಂಶದಷ್ಟು ನಿಮ್ಮದಾಗುವುದೇ ಎಂದು ಅನಿಸುವಂತೆ ಮಾಡುವ ಕಥೆಗಳಲ್ಲಿ ಒಂದು ಇದು. ಅವರು ಇನ್ನೂ ಸೌದೆ ಒಲೆ ಬಳಸುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಯಾರಾದರೂ ಅವರ ಬಗ್ಗೆ ತಿಳಿದಿದ್ದರೆ ತಿಳಿಸಿ, ನಾನು ಅವರ ಉದ್ಯಮದಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಅವರಿಗೊಂದು ಎಲ್‌ಪಿಜಿ ಸ್ಟವ್‌ ತೆಗೆದುಕೊಡುತ್ತೇನೆ” ಎಂದು ಆನಂದ್‌ ಮಹಿಂದ್ರಾ ಈ ಹಿಂದೆ ಟ್ವೀಟ್ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...