ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗ್ತಿವೆ. ಬಿಹಾರದ ಮಧುಬಾನಿ ಜಿಲ್ಲೆಯ ಶಿವನಗರ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದೆ.
ಮದುವೆಯಾದ ಮಾರನೆ ದಿನವೇ ವರ ಸಾವನ್ನಪ್ಪಿದ್ದಾನೆ. ವಧು ಪ್ರಜ್ಞೆ ತಪ್ಪಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮದುವೆಗೂ ಮುನ್ನ ವರನನ್ನು ವೃದ್ಧೆಯೊಬ್ಬಳು ಸ್ಪರ್ಶಿಸಿದ್ದಳಂತೆ. ವರನಿಗೆ ಆಕೆ ತಂತ್ರ-ಮಂತ್ರ ಮಾಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ವೃದ್ಧೆ ಭೇಟಿಯಾದ್ಮೇಲೆ ವರನ ಮಾನಸಿಕ ಸ್ಥಿತಿ ಹದಗೆಟ್ಟಿತ್ತಂತೆ. ಇದಾದ್ಮೇಲೆ ವರ ವಿಚಿತ್ರವಾಗಿ ಆಡ್ತಿದ್ದನಂತೆ.
ಮದುವೆಯನ್ನು ಕುಟುಂಬಸ್ಥರು ಮಾಡಿದ್ದಾರೆ. ಮೊದಲ ರಾತ್ರಿ ಇಬ್ಬರೂ ಸೆಲ್ಫಿ ತೆಗೆದುಕೊಂಡಿದ್ದಾರೆ. ಮರು ದಿನ ವಧು ತವರಿಗೆ ಹೋಗಿದ್ದಳಂತೆ. ಆಕೆ ತವರಿಗೆ ತೆರಳಿದ ಕೆಲ ಗಂಟೆ ನಂತ್ರ ವರನ ಶವ ಕೋಣೆಯಲ್ಲಿ ಸಿಕ್ಕಿದೆ. ಇದ್ರ ಬಗ್ಗೆ ವಿಚಾರಣೆ ನಡೆಯುತ್ತಿದೆ.