alex Certify ಮಾಲೀಕನ ರಕ್ಷಣೆಗಾಗಿ ತನ್ನ ಜೀವವನ್ನೇ ಬಿಟ್ಟ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲೀಕನ ರಕ್ಷಣೆಗಾಗಿ ತನ್ನ ಜೀವವನ್ನೇ ಬಿಟ್ಟ ಶ್ವಾನ

ಸಾಕುಪ್ರಾಣಿಗಳಲ್ಲಿ ಶ್ವಾನಗಳು ತನ್ನ ಮಾಲೀಕರಿಗೆ ನಿಸ್ವಾರ್ಥ ಸೇವೆ ಮಾಡುವುದಕ್ಕೆ‌ ಇನ್ನೊಂದು ನಿದರ್ಶನ ಇಲ್ಲಿದೆ.

ಹೌದು, ಕೇರಳದ ಕೊಟ್ಟಾಯಂನಲ್ಲಿ ಶ್ವಾನವೊಂದು ತನ್ನ ಮಾಲೀಕನೊಂದಿಗೆ ಬೆಳಗ್ಗೆ ಹಾಲು ತರಲು ಹೋಗಿದೆ‌. ಈ ವೇಳೆ ಮಾಲೀಕ ವಿದ್ಯುತ್ ತಂತಿ ಹಾದು ಹೋಗುವುದು ಗಮನಿಸಿದ ಶ್ವಾನ ಮಾಲೀಕ ತುಳಿಯುವುದಕ್ಕೆ ಮೊದಲೇ ತನ್ನ ಬಾಯಿಂದ ಆ ವೈರ್‌ನ್ನು ಎಳೆದಿದೆ. ವಿದ್ಯುತ್ ಪ್ರಸರವಾಗುತ್ತಿದ್ದರಿಂದ ಸ್ಥಳದಲ್ಲಿಯೇ ಶ್ವಾನ ಮೃತಪಟ್ಟಿದೆ

ಶ್ವಾನದ ಹೆಸರು ಅಪ್ಪು ಎಂದು ಹೇಳಲಾಗಿದ್ದು, ಮಾಲೀಕ ಅಜಯ್, ಶ್ವಾನ ಹಾಗೂ ಮಗುವಿನೊಂದಿಗೆ ಹಾಲು ತರಲು ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಹಿಂದೆ ಅಜಯ್‌ಗೆ ಅಪಘಾತವಾಗಿದ್ದರಿಂದ ಅಪ್ಪು, ಎಚ್ಚರಿಕೆ ವಹಿಸಲು ಹೋಗಿ ಕೊನೆಯುಸಿರೆಳೆದಿದೆ ಎಂದು ಹೇಳಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...