ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಬಂಪರ್ ಉಡುಗೊರೆ ನೀಡಿದೆ. 18 ಸಾವಿರ ಕೋಟಿ ಆದಾಯ ತೆರಿಗೆಯನ್ನು ಕೇಂದ್ರ ಸರ್ಕಾರ ವಾಪಸ್ ಮಾಡಿದೆ. ಸುದ್ದಿಗೋಷ್ಠಿ ನಡೆಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷ್ಯ ಹೇಳಿದ್ದಾರೆ.
41 ಕೋಟಿ ಜನ್ ಧನ್ ಯೋಜನೆಗೆ ಹಣ ವರ್ಗಾವಣೆ ಆಗಿದೆ ಎಂದಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಹಂತ ಹಂತವಾಗಿ ಯೋಜನೆ ಘೋಷಣೆ ಮಾಡ್ತೆವೆ. ಒಂದೊಂದಿ ದಿನ ಒಂದೊಂದು ವಲಯಕ್ಕೆ ಯೋಜನೆ ಘೋಷಣೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಎಂಎಸ್ಎಂಇ ಕಂಪನಿಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು. 45 ಲಕ್ಷ ಸಣ್ಣ ಕೈಗಾರಿಕೆಗಳಿಗೆ ಇದ್ರಿಂದ ಲಾಭವಾಗಲಿದೆ. 100 ಕೋಟಿ ವಹಿವಾಟು ಇರುವ ಕೈಗಾರಿಕೆಗಳಿಗೆ ಇದ್ರಿಂದ ಅನುಕೂಲವಾಗಲಿದೆ. ಎಂಎಸ್ ಎಂಇಗಳಿಗೆ 6 ವಿಧಾನದಲ್ಲಿ ರಿಲೀಫ್ ನೀಡಲಾಗಿದೆ. ಯಾವುದೇ ಅಡಮಾನವಿಲ್ಲದೆ ಸಾಲ ನೀಡಲು ನಿರ್ಧರಿಸಲಾಗಿದೆ.