alex Certify ಭಾರತ-ಶ್ರೀಲಂಕಾ ಟಿ-20: ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ ಸೇರಿ 9 ಆಟಗಾರರು ಹೊರಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ-ಶ್ರೀಲಂಕಾ ಟಿ-20: ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ ಸೇರಿ 9 ಆಟಗಾರರು ಹೊರಕ್ಕೆ

hardik pandya, prithvi shaw सहित 9 खिलाड़ी श्रीलंका के खिलाफ टी20 सीरीज से  बाहर! ind vs sl Hardik Pandya Prithvi Shaw Suryakumar Yadav Ishan Kishan  Devdutt Padikkal and Krishnappa Gowtham will not

ಭಾರತ-ಶ್ರೀಲಂಕಾ ನಡುವಿನ ಎರಡನೇ ಟಿ- 20 ಪಂದ್ಯ ಇಂದು ನಡೆಯಲಿದೆ. ಈ ಮೊದಲು ಜುಲೈ 27 ರ ಮಂಗಳವಾರ ಈ ಪಂದ್ಯ ನಡೆಯಬೇಕಿತ್ತು. ಆದ್ರೆ ಕೃನಾಲ್ ಪಾಂಡ್ಯ ಕೊರೊನಾ ವರದಿ ಪಾಸಿಟಿವ್ ಬಂದ ಕಾರಣ ಪಂದ್ಯವನ್ನು ಮುಂದೂಡಲಾಗಿತ್ತು.  ಇಂದು ಎರಡನೇ ಪಂದ್ಯ ಹಾಗೂ ಗುರುವಾರ ಮೂರನೇ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ 9 ಭಾರತೀಯ ಆಟಗಾರರು ಆಡ್ತಿಲ್ಲ.

ವರದಿ ಪ್ರಕಾರ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ,ಇಶಾನ್ ಕಿಶನ್, ದೇವದತ್ ಪಡಿಕ್ಕಲ್ ಮತ್ತು ಕೃಷ್ಣಪ್ಪ ಗೌತಮ್ ಶ್ರೀಲಂಕಾ ವಿರುದ್ಧ ಆಡುತ್ತಿಲ್ಲ. ಇವರೆಲ್ಲರೂ ಕೃನಾಲ್ ಜೊತೆ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಆದ್ರೆ ಯಾರ್ಯಾರು ನಿಕಟ ಸಂಪರ್ಕದಲ್ಲಿದ್ದರು ಎಂಬ ಬಗ್ಗೆ ಇನ್ನೂ ಅಧಿಕೃತ ಪಟ್ಟಿ ಹೊರಬಿದ್ದಿಲ್ಲ.

ಕೃನಾಲ್ ಸಂಪರ್ಕದಲ್ಲಿದ್ದ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ. ಬುಧವಾರ ಮತ್ತೆ ಪರೀಕ್ಷೆ ನಡೆದಿದೆ. ಆದ್ರೆ ನಿಕಟ ಸಂಪರ್ಕದಲ್ಲಿದ್ದವರನ್ನು ಸಂಪೂರ್ಣ ಪ್ರತ್ಯೇಕಿಸಲಾಗಿದ್ದು, ಅವರು ಉಳಿದ ಎರಡೂ ಪಂದ್ಯಗಳಲ್ಲಿ ಆಡ್ತಿಲ್ಲ.

ಟಿ-20 ಪಂದ್ಯ ಮುಗಿಸಿ ಟೀಂ ಇಂಡಿಯಾ ಜುಲೈ 30ರಂದು ಭಾರತಕ್ಕೆ ವಾಪಸ್ ಆಗ್ಬೇಕಿತ್ತು. ಶ್ರೀಲಂಕಾ ಪ್ರೋಟೊಕಾಲ್ ಪ್ರಕಾರ, ಕೃನಾಲ್ ಪಾಂಡ್ಯ, ಭಾರತಕ್ಕೆ ವಾಪಸ್ ಆಗಲು ಸಾಧ್ಯವಿಲ್ಲ. ಕಡ್ಡಾಯವಾಗಿ ಐಸೋಲೇಷನ್ ಅವಧಿ ಮುಗಿಸಿ, ಆರ್ಟಿಪಿಸಿಆರ್ ವರದಿ ನಕಾರಾತ್ಮಕವಾಗಿ ಬಂದ ಮೇಲೆ ವಾಪಸ್ ಬರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...