alex Certify ಎರಡನೇ ಟೆಸ್ಟ್‌ನಲ್ಲಿ ಅಯ್ಯರ್‌ ಬದಲಿಗೆ ವಿಹಾರಿ ಆಯ್ಕೆ ಮಾಡಿದ್ದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡನೇ ಟೆಸ್ಟ್‌ನಲ್ಲಿ ಅಯ್ಯರ್‌ ಬದಲಿಗೆ ವಿಹಾರಿ ಆಯ್ಕೆ ಮಾಡಿದ್ದರ ಹಿಂದಿದೆ ಈ ಕಾರಣ

ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಬೆನ್ನು ನೋವಿನಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದ ಕಾರಣ ಈ ಅಂಗಳದಲ್ಲಿ ತಮ್ಮ ವೃತ್ತಿ ಜೀವನ 99ನೇ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳಲು ಕೊಹ್ಲಿಗೆ ಸಾಧ್ಯವಾಗಿಲ್ಲ.

ಕೊಹ್ಲಿ ಬದಲಿಗೆ ಆರಂಭಿಕ ಕೆ.ಎಲ್. ರಾಹುಲ್ ತಂಡದ ಸಾರಥ್ಯ ವಹಿಸಿದ್ದಾರೆ. ಕೊಹ್ಲಿ ಅವರ ಸ್ಥಾನದಲ್ಲಿ ಹನುಮ ವಿಹಾರಿ ಆಡಲಿಳಿದಿದ್ದಾರೆ. ಶ್ರೇಯಸ್ ಅಯ್ಯರ್‌ ಬದಲಿಗೆ ವಿಹಾರಿ ಈ ಪಂದ್ಯದಲ್ಲಿ ಆಡುತ್ತಿರುವುದು ಒಂದಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ. ತಮ್ಮ ಪಾದಾರ್ಪಣೆ ಸರಣಿಯಲ್ಲಿ ಉತ್ತಮ ಆಟದ ಮೂಲಕ ಗಮನ ಸೆಳೆದಿದ್ದ ಅಯ್ಯರ್‌ ಬದಲಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಗಮಿಸಿದ್ದ ಭಾರತ ’ಎ’ ತಂಡದಲ್ಲಿ ಆಡಿದ್ದ ವಿಹಾರಿ ಕಣಕ್ಕಿಳಿದಿದ್ದಾರೆ.

ಸೋಲಿನ ನಂತರವೂ ತಂಡದ ಆಟಗಾರರನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ

ಇದೇ ವೇಳೆ ಹೊಟ್ಟೆ ನೋವಿನ ಸಮಸ್ಯೆ ಕಾರಣ ಅಯ್ಯರ್‌ ತಂಡದಿಂದ ಆಚೆ ಇದ್ದು, ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಈ ಪಂದ್ಯಕ್ಕೆ ವೇಗಿ ಜಸ್ಪ್ರಿತ್‌ ಬುಮ್ರಾ ಉಪನಾಯಕರಾಗಿದ್ದಾರೆ. ಸುದೀರ್ಘ ಸಮಸ್ಯೆಯಿಂದ ಫಾರಂ ಸಮಸ್ಯೆಯಿಂದಾಗಿ ತಂಡದಲ್ಲಿ ತಮ್ಮ ಸ್ಥಾನವೇ ಅಭದ್ರವಾಗಿರುವ ಕಾರಣ ಅಜಿಂಕ್ಯಾ ರಹಾನೆ ಉಪನಾಯಕತ್ವದಿಂದ ಹೊರಬಿದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...