alex Certify ದೇಶದ ಜನತೆಗೆ ಮಹತ್ವದ ಸೂಚನೆ: ನಿಮಗೂ ಬಂದಿದೆಯಾ ಈ ವಿಭಿನ್ನ ಧ್ವನಿ, ಕಂಪನದ ಮೆಸೇಜ್; ಗಾಬರಿಯಾಗಬೇಡಿ, ಇದು ಪ್ರಯೋಗವಷ್ಟೇ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಮಹತ್ವದ ಸೂಚನೆ: ನಿಮಗೂ ಬಂದಿದೆಯಾ ಈ ವಿಭಿನ್ನ ಧ್ವನಿ, ಕಂಪನದ ಮೆಸೇಜ್; ಗಾಬರಿಯಾಗಬೇಡಿ, ಇದು ಪ್ರಯೋಗವಷ್ಟೇ

ನವದೆಹಲಿ: ವಿಭಿನ್ನ ಧ್ವನಿ ಮತ್ತು ಕಂಪನದೊಂದಿಗೆ ತುರ್ತು ಪರಿಸ್ಥಿತಿಯ ಕುರಿತು ನಿಮ್ಮ ಮೊಬೈಲ್‌ನಲ್ಲಿ ಪರೀಕ್ಷಾ ಸಂದೇಶವನ್ನು ನೀವು ಸ್ವೀಕರಿಸಬಹುದು.

ದಯವಿಟ್ಟು ನೀವೇನು ಗಾಬರಿಯಾಗಬೇಡಿ, ಈ ಸಂದೇಶವು ನಿಜವಾದ ತುರ್ತು ಪರಿಸ್ಥಿತಿಯನ್ನು ಸೂಚಿಸುವುದಿಲ್ಲ. ಬದಲಿಗೆ ಯೋಜಿತ ಪ್ರಯೋಗ ಪ್ರಕ್ರಿಯೆಯ ಭಾಗವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ಈ ಸಂದೇಶವನ್ನು ಕಳುಹಿಸುತ್ತಿದೆ.

ತುರ್ತು ಸಂದರ್ಭದಲ್ಲಿ ದೇಶದ ಜನತೆಗೆ ಎಚ್ಚರಿಕೆ ಸಂದೇಶ ನೀಡುವ ಉದ್ದೇಶದಿಂದ ಈಗಾಗಲೇ ಅನೇಕ ಬಾರಿ ಇಂತಹ ಮೆಸೇಜ್ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ.

ಪ್ರಸ್ತುತ ಇಸ್ರೇಲ್ –ಹಮಾಸ್ ಯುದ್ಧದ ಸನ್ನಿವೇಶದಲ್ಲಿಯೂ ಇದೇ ರೀತಿಯ ಸಂದೇಶ ರವಾನಿಸಿ ಸುರಕ್ಷಿತರಾಗಿರುವ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...