alex Certify ನಡೆದರೆ ಕೈ-ಕಾಲುಗಳಲ್ಲಿ ಊತ ಬರುತ್ತಿದೆಯೇ…..? ಗಂಭೀರ ಕಾಯಿಲೆಯ ಲಕ್ಷಣ ಅದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡೆದರೆ ಕೈ-ಕಾಲುಗಳಲ್ಲಿ ಊತ ಬರುತ್ತಿದೆಯೇ…..? ಗಂಭೀರ ಕಾಯಿಲೆಯ ಲಕ್ಷಣ ಅದು…!

ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳೂ ಶುರುವಾಗುತ್ತವೆ. ಕೈ ಮತ್ತು ಕಾಲುಗಳಲ್ಲಿ ನೋವು ಮತ್ತು ಊತ ಇವುಗಳಲ್ಲಿ ಪ್ರಮುಖವಾದದ್ದು. ಕೈ-ಕಾಲುಗಳಲ್ಲಿ ನೋವು ಮತ್ತು ಊತ ಅನೇಕ ಕಾರಣಗಳಿಂದ ಉಂಟಾಗಬಹುದು. ಆದರೆ ಅದರ ಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ. ಏಕೆಂದರೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಅಪಾಯಕಾರಿ ರೂಪವನ್ನು ಪಡೆಯಬಹುದು. ಸ್ವಲ್ಪ ವೇಗವಾಗಿ ನಡೆದರೂ ಕೈಕಾಲುಗಳಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳುವುದು ಅನೇಕ ಬಾರಿ ಸಂಭವಿಸುತ್ತದೆ. ಇದು ಗಂಭೀರ ಕಾಯಿಲೆಯ ಸಂಕೇತವೂ ಆಗಿರಬಹುದು.

ಸಂಧಿವಾತದ ಮುಂದುವರಿದ ಹಂತ ರುಮಟಾಯ್ಡ್ ಆರ್ಥರೈಟಿಸ್‌. ಇದು ಸ್ವಯಂ ನಿರೋಧಕ ಕಾಯಿಲೆಯಾಗಿದೆ. ನಮ್ಮ ರೋಗನಿರೋಧಕ ಶಕ್ತಿಯು ಕಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ.  ಆದರೆ ಸ್ವಯಂ ನಿರೋಧಕ ಕೋಶಗಳು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯಕರ ಕೋಶಗಳನ್ನು ಹಾನಿಗೊಳಿಸುತ್ತವೆ. ಪ್ರಪಂಚದಾದ್ಯಂತ  ಮಹಿಳೆಯರು ಸಂಧಿವಾತದಂತಹ ಕಾಯಿಲೆಗಳಿಂದ ಹೆಚ್ಚು ಬಳಲುತ್ತಿದ್ದಾರೆ. ಕೈ, ಮಣಿಕಟ್ಟು, ಪಾದ, ಮೊಣಕಾಲು, ಭುಜ ಮತ್ತು ಮೊಣಕೈಗಳಲ್ಲಿ ಊತವು ಅದರ ಆರಂಭಿಕ ಲಕ್ಷಣ. ರುಮಟಾಯ್ಡ್ ಸಂಧಿವಾತವು ಕಣ್ಣು, ಶ್ವಾಸಕೋಶ ಮತ್ತು ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ರುಮಟಾಯ್ಡ್ ಆರ್ಥರೈಟಿಸ್‌ ಲಕ್ಷಣಗಳು

ಈ ರೋಗದಲ್ಲಿ ಹೆಚ್ಚಿನ ನೋವು ಕೀಲುಗಳಲ್ಲಿ ಕಂಡುಬರುತ್ತದೆ. ಮಣಿಕಟ್ಟು, ಕಾಲು ಮತ್ತು ಕೀಲುಗಳಲ್ಲಿ ಗರಿಷ್ಠ ನೋವು ಇರುತ್ತದೆ. ಈ ರೋಗವು ಅಪಾಯಕಾರಿ ರೂಪ ಪಡೆದಾಗ ಕೀಲುಗಳಲ್ಲಿ ಕೆಂಪು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಎರಡೂ ಕೈ ಮತ್ತು ಕಾಲುಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರಬಹುದು. ಕೈ-ಕಾಲುಗಳಲ್ಲಿ ಊತ ಕೂಡ ಬರಬಹುದು. ಇದು ಮತ್ತಷ್ಟು ಗಂಭೀರ ಸ್ವರೂಪ ಪಡೆದರೆ ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಬರವಣಿಗೆ, ಏನನ್ನಾದರೂ ಹಿಡಿದುಕೊಳ್ಳುವುದು, ನಡೆಯುವುದು, ಮೆಟ್ಟಿಲು ಇಳಿಯುವುದು ಎಲ್ಲವೂ ಅಸಾಧ್ಯವೆನಿಸುತ್ತದೆ. ಅಷ್ಟೇ ಅಲ್ಲ ರೋಗಿಯು ಅತಿಯಾದ ಆಯಾಸ, ನಿದ್ರಾಹೀನತೆ, ಹಸಿವಿನ ಕೊರತೆ ಮತ್ತು ಜ್ವರದಿಂದ ಬಳಲಬಹುದು.

ರುಮಟಾಯ್ಡ್‌ ಆರ್ಥರೈಟಿಸ್‌ಗೆ ಪರಿಹಾರ…

ಈ ರೋಗಕ್ಕೆ ಹಲವು ವಿಧದ ಚಿಕಿತ್ಸೆಯಿದೆ. ಪ್ರಮುಖವಾಗಿ ಆಹಾರದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಜೀವನಶೈಲಿಯಲ್ಲಿ ಕೆಲವು ಉತ್ತಮ ಅಭ್ಯಾಸಗಳನ್ನು ಸೇರಿಸಿಕೊಳ್ಳಬೇಕು. ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸಿ. ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು. ಇದರಿಂದ ಊತದ ಸಮಸ್ಯೆ ಕಡಿಮೆಯಾಗುತ್ತದೆ. ದೇಸಿ ತುಪ್ಪವನ್ನು ಬಳಸಿ. ಇದರಿಂದ ಮೂಳೆಗಳು ದೃಢವಾಗಿರುತ್ತವೆ. ಪ್ರತಿದಿನ ತಪ್ಪದೇ ವ್ಯಾಯಾಮ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...