alex Certify ಈ ದಿನದಂದು ʼಔಷಧಿʼಗಳನ್ನು ಖರೀದಿಸಿದರೆ ಸುಧಾರಿಸುತ್ತೆ ನಿಮ್ಮ ಆರೋಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದಿನದಂದು ʼಔಷಧಿʼಗಳನ್ನು ಖರೀದಿಸಿದರೆ ಸುಧಾರಿಸುತ್ತೆ ನಿಮ್ಮ ಆರೋಗ್ಯ

ಮನುಷ್ಯನಿಗೆ ಅನಾರೋಗ್ಯ ಸಮಸ್ಯೆ ಕಾಡುವುದು ಸಹಜ. ಆದರೆ ಆತ ಪದೇ ಪದೇ ಈ ಸಮಸ್ಯೆಗೆ ಒಳಗಾದರೆ ಅದಕ್ಕೆ ದೋಷಗಳೇ ಕಾರಣ. ಈ ದೋಷಗಳನ್ನು ನಿವಾರಿಸಿ ನೀವು ಆರೋಗ್ಯವಾಗಿರಲು ಕೆಲವು ಪರಿಹಾರಗಳನ್ನು ಮಾಡಿಕೊಳ್ಳಿ.

ನೀವು ಆರೋಗ್ಯ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸುತ್ತಿದ್ದರೆ ಸೋಮವಾರದಂದು ಶಿವನ ದೇವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿ. ಇದನ್ನು 11 ವಾರಗಳ ಕಾಲ ಮಾಡಿಸಿ. ಆ ವೇಳೆ “ತತ್ ಪುರುಷ ವಿಜ್ಞಾನ ವಿದ್ಮಹೇ ಮಹಾದೇವ ಧೀಮಹಿ, ತನ್ನೋ ರುದ್ರ ಪ್ರಚೋದಯತ್” ಈ ರುದ್ರ ಗಾಯತ್ರಿ ಮಂತ್ರವನ್ನು ಜಪಿಸಿ. ಹೀಗೆ ಮಾಡಿದರೆ ನಿಮ್ಮ ಅನಾರೋಗ್ಯದ ಸಮಸ್ಯೆ ದೂರವಾಗುತ್ತದೆ.

ಹಾಗೇ ನೀವು ಕಾಯಿಲೆಗೆ ಔಷಧಿ ಖರೀದಿಸುವಾಗ ಹುಣ್ಣಿಮೆ ದಿನದಂದು ಅಥವಾ ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ ಮತ್ತು ತ್ರಯೋದಶಿಯ ಶುಕ್ಲಪಕ್ಷದಂದು ಔಷಧಗಳನ್ನು ಖರೀದಿಸಿ ಸೇವಿಸಿ. ಇದರಿಂದ ಮತ್ತೆ ನೀವು ಕಾಯಿಲೆಗೆ ಬೀಳುವುದಿಲ್ಲ. ಹಾಗೇ ಗುರುವಾರ ಅಂಗೈಯಲ್ಲಿ ಹಳದಿ ಸಾಸಿವೆ ಇಟ್ಟುಕೊಂಡು “ಓಂ ಗಣಪತಾಯ ನಮಃ” ಎಂದು 1008ಬಾರಿ ಜಪಿಸಿ, ನಂತರ ಅದನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ನಿಮ್ಮ ಕೊರಳಿಗೆ ಹಾಕಿಕೊಳ್ಳಿ. ಇದರಿಂದ ಆರೋಗ್ಯ ಸಮಸ್ಯೆ ಕಾಡುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...