alex Certify ಹಾಕಿ ತಂಡದ ದಂತಕತೆ ಕೇಶವ ಚಂದ್ರ ದತ್​ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಕಿ ತಂಡದ ದಂತಕತೆ ಕೇಶವ ಚಂದ್ರ ದತ್​ ಇನ್ನಿಲ್ಲ

ಭಾರತ ಹಾಕಿ ತಂಡದ ಮಾಜಿ ಆಟಗಾರ ಕೇಶವ್​ ಚಂದ್ರ ದತ್​​ ಕೊನೆಯುಸಿರೆಳೆದಿದ್ದಾರೆ. ಕೇಶವ್​​ ಚಂದ್ರ ದತ್​ ಹೃದಯ ಸಂಬಂಧಿ ಸಮಸ್ಯೆಯಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಟೀಂ ಇಂಡಿಯಾ ಹಾಕಿ ತಂಡದ ಆಟಗಾರನಾಗಿದ್ದ ಕೇಶವಚಂದ್ರ ದತ್​ 1948 ಹಾಗೂ 1952ರಲ್ಲಿ ಒಲಿಂಪಿಕ್​​ ಪಂದ್ಯದಲ್ಲಿ ಹಾಕಿ ತಂಡ ಚಿನ್ನದ ಪದಕ ಸಂಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಕೆಲ ಸಮಯಗಳಿಂದ ಇವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಕೇಶವ್​​​ ದತ್ತ ನಿಧನದ ವಾರ್ತೆ ಕೇಳಿ ನಾವೆಲ್ಲ ದುಃಖದ ಸಾಗರದಲ್ಲಿ ಮುಳುಗಿದ್ದೇವೆ. 1948 ಹಾಗೂ 1952ರ ಒಲಿಂಪಿಕ್​ ಪಂದ್ಯಾವಳಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು. ಇಂದು ಕೇಶವ್​​ರ ನಿಧನದ ವಾರ್ತೆ ಕೇಳಿದ ಬಳಿಕ ಒಂದು ಯುಗದ ಅಂತ್ಯವಾದಂತೆ ಭಾಸವಾಗುತ್ತಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನೇಂದ್ರೋ ನಿಂಗೋಂಬಮ್​ ಹೇಳಿದ್ದಾರೆ.

ಟೀಂ ಇಂಡಿಯಾ ಹಾಕಿ ತಂಡ ಕೂಡ ಶ್ರೇಷ್ಟ ಆಟಗಾರನ ನಿಧನದ ವಾರ್ತೆ ಕೇಳಿ ಕಂಬನಿ ಮಿಡಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...