alex Certify ಶಾರೀರಿಕ ಸಂಬಂಧ ಬೆಳೆಸಲು ಒತ್ತಾಯಿಸಿದ ಸ್ನೇಹಿತನನ್ನೇ ಮುಗಿಸಿದ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೀರಿಕ ಸಂಬಂಧ ಬೆಳೆಸಲು ಒತ್ತಾಯಿಸಿದ ಸ್ನೇಹಿತನನ್ನೇ ಮುಗಿಸಿದ…..!

ಸಂಬಂಧದ ವಿಚಾರ ಕೊಲೆಯಲ್ಲಿ ಅಂತ್ಯವಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಡಿಸೆಂಬರ್ 27ರಂದು ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಜಾತ್ರಾ ಮೈದಾನದ ಚರಂಡಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಅಪರಿಚಿತ ಶವ ವಶಕ್ಕೆ ಪಡೆದ ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ. ಮೃತ ವ್ಯಕ್ತಿ ಹೆಸರು ಯಶ್ ಸೋನಿ ಎಂಬುದು ಗೊತ್ತಾಗಿದೆ. ನಂತ್ರ ತನಿಖೆ ಶುರು ಮಾಡಿದ ಪೊಲೀಸರಿಗೆ ಆಘಾತಕಾರಿ ಸಂಗತಿ ತಿಳಿದಿದೆ.

ಯಶ್ ಸೋನಿ ಸ್ನೇಹಿತನೇ ಆತನ ಕೊಲೆ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ದೀಪಕ್ ಎಂಬಾತ ತಪ್ಪೊಪ್ಪಿಕೊಂಡಿದ್ದಾನೆ. ಅಷ್ಟಕ್ಕೂ ಕೊಲೆಗೆ ಸಂಬಂಧ ಕಾರಣವಾಗಿದೆ. ಯಶ್ ಸೋನಿ ಸಲಿಂಗಕಾಮಿ. ಆತ ದೀಪಕ್ ಗೆ ಶಾರೀರಿಕ ಸಂಬಂಧ ಬೆಳೆಸುವಂತೆ ಒತ್ತಡ ಹೇರುತ್ತಿದ್ದನಂತೆ. ಸದಾ ಸೋನಿ ಒತ್ತಡ ಹೇರುತ್ತಿರುವುದು ದೀಪಕ್ ಕೋಪಕ್ಕೆ ಕಾರಣವಾಗಿತ್ತಂತೆ. ದೀಪಕ್ ಗೆ ಈ ಸಂಬಂಧ ಇಷ್ಟವಿರಲಿಲ್ಲವಂತೆ. ಇದರಿಂದಾಗಿ ಇಬ್ಬರ ನಡುವೆ ಜಗಳವಾಗಿತ್ತು. ಕೋಪದಲ್ಲಿದ್ದ ದೀಪಕ್, ಯಶ್ ಸೋನಿ ಹತ್ಯೆಗೈದು ಚರಂಡಿಗೆ ಎಸೆದಿದ್ದಾನೆ. ಪ್ರಕರಣ ಬೇಧಿಸಿದ ಪೊಲೀಸರು ಆರೋಪಿ ದೀಪಕ್ ನನ್ನು ಜೈಲಿಗೆ ಕಳುಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...