alex Certify ಮಾಜಿ ಕ್ರಿಕೆಟಿಗ ಮಹಾಮಾರಿಗೆ ಬಲಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಕ್ರಿಕೆಟಿಗ ಮಹಾಮಾರಿಗೆ ಬಲಿ…..!

ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಅಂಬಾ ಪ್ರತಾಪ್ ಸಿಂಹಜಿ ಜಡೇಜಾ ಸಾವನ್ನಪ್ಪಿದ್ದಾರೆ. ಅವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮಾಹಿತಿ ನೀಡಿದೆ.

ಮೃತರಿಗೆ 69 ವರ್ಷ ವಯಸ್ಸಾಗಿತ್ತು. ಅವರಿಗೆ ಇತ್ತೀಚೆಗೆ ಕೊರೊನಾ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಜಡೇಜಾ ಎಂಟು ರಣಜಿ ಪಂದ್ಯಗಳನ್ನು ಆಡಿದ್ದು, 100 ರನ್ ಗಳಿಸಿದ್ದರು. ಅಲ್ಲದೇ, 10 ವಿಕೆಟ್ ಗಳನ್ನು ಗಳಿಸಿದ್ದರು. ಸೌರಾಷ್ಟ್ರ ತಂಡದ ಮಧ್ಯಮ ವಿಭಾಗದ ಬೌಲರ್ ಹಾಗೂ ಬಲಗೈ ಬ್ಯಾಟ್ಸಮನ್ ಆಗಿದ್ದರು. ಅಲ್ಲದೇ, ಅವರು ಗುಜರಾತ್ ನ ನಿವೃತ್ತ ಡಿ ಎಸ್‌ ಪಿ ಆಗಿದ್ದರು.

ಇವರ ನಿಧನಕ್ಕೆ ಗುಜರಾತ್ ನಲ್ಲಿ ಶೋಕ ವ್ಯಕ್ತಪಡಿಸಲಾಗಿದೆ. ಬಿಸಿಸಿಐನ ಮಾಜಿ ಕಾರ್ಯದರ್ಶಿ ನಿರಂಜನ್ ಶಾ, ಅಂಬಾಪ್ರತಾಪ್‌ ಸಿಂಹಜಿ ಅದ್ಭುತ ಆಟಗಾರರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಅಲ್ಲದೇ, ಹಲವು ಕ್ರಿಕೆಟಿಗರು ಕೂಡ ಸಂತಾಪ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...