alex Certify BREAKING: ತಡರಾತ್ರಿ ಬೆಂಗಳೂರಲ್ಲಿ ಭಾರಿ ಅಗ್ನಿ ಅವಘಡ; ಸಿಲಿಂಡರ್ ಸ್ಪೋಟ, 4 ಕಾರ್, 3 ಬೈಕ್ ಗೆ ಹಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ತಡರಾತ್ರಿ ಬೆಂಗಳೂರಲ್ಲಿ ಭಾರಿ ಅಗ್ನಿ ಅವಘಡ; ಸಿಲಿಂಡರ್ ಸ್ಪೋಟ, 4 ಕಾರ್, 3 ಬೈಕ್ ಗೆ ಹಾನಿ

ಬೆಂಗಳೂರು: ಬೆಂಗಳೂರು ವಿವೇಕನಗರ ಮುಖ್ಯ ರಸ್ತೆಯ ವನ್ನಾರ್ ಪೇಟ್ ನಲ್ಲಿ ಕಾರ್ ಗ್ಯಾರೇಜ್ ನಲ್ಲಿ ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.

ನಾಸಿರ್ ಎಂಬವರಿಗೆ ಸೇರಿದ ಗ್ಯಾರೇಜ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಗ್ಯಾರೇಜ್ ನಲ್ಲಿದ್ದ ಎರಡು ಸಿಲಿಂಡರ್ ಸ್ಫೋಟಗೊಂಡು ಭಾರಿ ಸದ್ದು ಕೇಳಿಬಂದಿದೆ. ಬೆಂಕಿಯ ಕೆನ್ನಾಲಿಗೆಗೆ 4 ಕಾರ್, 3 ಬೈಕ್ ಸುಟ್ಟು ಕರಕಲಾಗಿವೆ.

ಗ್ಯಾರೇಜ್ ಪಕ್ಕದ ದೇವಾಲಯ, ಮನೆಗೆ ಸಣ್ಣಪುಟ್ಟ ಹಾನಿಯಾಗಿದ್ದು, ಬೆಂಕಿ ತಗುಲಿದ ಹಗಲೊತ್ತಲ್ಲೇ ಮೂರು ಕಾರ್ ಗಳನ್ನು ಮಾಲಿಕ ಹೊರಗೆ ತಂದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ವಿವೇಕನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...