alex Certify ಮತ್ತೆ ಕರ್ನಾಟಕ ಬಂದ್: ಕನ್ನಡ ಸಂಘಟನೆಗಳ ಬಂದ್ ಬೆನ್ನಲ್ಲೇ ಮತ್ತೊಂದು ಬಂದ್ ಗೆ ರೈತರ ಕರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಕರ್ನಾಟಕ ಬಂದ್: ಕನ್ನಡ ಸಂಘಟನೆಗಳ ಬಂದ್ ಬೆನ್ನಲ್ಲೇ ಮತ್ತೊಂದು ಬಂದ್ ಗೆ ರೈತರ ಕರೆ

ಬೆಂಗಳೂರು: ಕನ್ನಡಿಗರಿಗೆ ಮತ್ತೊಂದು ಬಂದ್ ಬಿಸಿ ತಟ್ಟಲಿದೆ. ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಅಷ್ಟೇನೂ ಯಶಸ್ವಿಯಾಗಿಲ್ಲ.

ಇದರ ಬೆನ್ನಲ್ಲೇ ರೈತರು ಬಂದ್ ಗೆ ಕರೆ ಕೊಟ್ಟಿದ್ದಾರೆ. ಡಿಸೆಂಬರ್ 8 ರಂದು ಭಾರತ್ ಬಂದ್ ಬೆಂಬಲಿಸಿ ರಾಜ್ಯದ ರೈತರಿಂದಲೂ ರಣಕಹಳೆ ಮೊಳಗಿಸಲಾಗುವುದು. ಅಂದು ಕರ್ನಾಟಕವನ್ನು ಬಂದ್ ಮಾಡಲು ರಾಜ್ಯ ರೈತ ಸಂಘ ಹಸಿರು ಸೇನೆ ನಿರ್ಧರಿಸಿದೆ. ಡಿಸೆಂಬರ್ 9 ರಂದು ಬಾರುಕೋಲು ಚಳವಳಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತ ಸಂಘದ ನಾಯಕರು ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ನೀತಿ ವಿರೋಧಿಸಿ ಹೋರಾಟ ಕೈಗೊಂಡಿದ್ದು, ಡಿಸೆಂಬರ್ 8 ರಂದು ರೈತ ಸಂಘಟನೆಯಿಂದ ರಾಜ್ಯದಲ್ಲಿಯೂ ಬಂದ್ ಆಚರಿಸಲಾಗುವುದು. ಎಲ್ಲ ಹೆದ್ದಾರಿ ಬಂದ್ ಮಾಡಲಿದ್ದು, ಜಿಲ್ಲಾ ಕೇಂದ್ರಗಳಲ್ಲಿಯೂ ಬಂದ್ ನಡೆಯಲಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...