alex Certify ʼಪುಷ್ಪ- 2ʼ ನಲ್ಲಿ ಶ್ರೀವಲ್ಲಿ ಕೊಲೆಯಾಗುತ್ತಾ….? ತಮ್ಮದೇ ಥಿಯರಿ ಮುಂದಿಟ್ಟ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪುಷ್ಪ- 2ʼ ನಲ್ಲಿ ಶ್ರೀವಲ್ಲಿ ಕೊಲೆಯಾಗುತ್ತಾ….? ತಮ್ಮದೇ ಥಿಯರಿ ಮುಂದಿಟ್ಟ ನೆಟ್ಟಿಗರು

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಿರ್ವಹಿಸಿದ ಶ್ರೀವಲ್ಲಿ ಚಿತ್ರದ ಬಗ್ಗೆ ಜಾಲತಾಣದಲ್ಲಿ ದೊಡ್ಡ ಚರ್ಚೆ ನಡೆದಿದೆ.‌

ಚಿತ್ರದ ಎರಡನೇ ಚಾಪ್ಟರ್ ಬಿಡುಗಡೆಗೂ ಮುನ್ನವೇ ಚಿತ್ರವು ಶ್ರೀವಲ್ಲಿ ಸಾವಿಗೆ ಸಾಕ್ಷಿಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಸುಕುಮಾರ್ ನಿರ್ದೇಶನದ ಚಿತ್ರದ ಎರಡನೇ ಚಾಪ್ಟರ್ ಇನ್ನೂ ಒಂದು ಸಿದ್ಧತಾ ಹಂತದಲ್ಲಿದೆ. ಆದರೆ ನೆಟ್ಟಿಗರು ಎರಡನೇ ಭಾಗದ ಬಗ್ಗೆ ಪ್ರಮುಖ ಬೆಳವಣಿಗೆಯನ್ನು ಊಹಿಸಿದ್ದಾರೆ.

ಬ್ಲಾಕ್‌ಬಸ್ಟರ್ ಚಲನಚಿತ್ರ ‘ಪುಷ್ಪಾ’ದ ಎರಡನೇ ಕಂತಿನಲ್ಲಿ ಪುಷ್ಪ ರಾಜ್- ಭನ್ವರ್ ಸಿಂಗ್ ಶೇಕಾವತ್ ನಡುವಿನ ಘರ್ಷಣೆಯ ಸ್ವರೂಪದ ಬಗ್ಗೆ ಜಾಲತಾಣದಲ್ಲಿ ಊಹೆ ಮಾಡುತ್ತಿದ್ದಾರೆ. ಪ್ರಮುಖವಾಗಿ ರಶ್ಮಿಕಾ ಮಂದಣ್ಣ ಅವರ ಪಾತ್ರದ ಸುತ್ತಲಿನ ವಿಷಯಗಳು ಚರ್ಚಿಸಲ್ಪಡುತ್ತಿವೆ.

ರಶ್ಮಿಕಾ ಮಂದಣ್ಣರ ಪಾತ್ರ ಶ್ರೀವಲ್ಲಿಯನ್ನು ಖಳನಾಯಕರು ಕೊಲ್ಲುತ್ತಾರೆ ಎಂಬ ಊಹಾಪೋಹಗಳು ಹರಡಿವೆ. ಸುಕುಮಾರ್ ಏನು ಮಾಡಿದ್ದಾರೋ ಗೊತ್ತಿಲ್ಲ. ಆದರೆ ಟ್ವಿಟರ್ ಬಳಕೆದಾರರು ಎರಡು ಸಾಧ್ಯತೆಗಳನ್ನು ಊಹಿಸುತ್ತಾರೆ.

‘ಕೆಜಿಎಫ್ 2’ ರೀತಿ ನಾಯಕನ ಮೇಲೆ ಸೇಡು ತೀರಿಸಿಕೊಳ್ಳಲು ನಾಯಕಿಯನ್ನು ಖಳನಾಯಕರು ಕೊಲೆ ಮಾಡುತ್ತಾರೆ ಎಂದೆಲ್ಲ ವ್ಯಾಖ್ಯಾನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...