alex Certify SHOCKING: ಮೆಟ್ಟಿಲಿಂದ ಬಿದ್ದು ಮಹಿಳೆ ಸಾವು, ಗಂಟಲು ಸೀಳಿತ್ತು ಮಾಂಗಲ್ಯಸರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮೆಟ್ಟಿಲಿಂದ ಬಿದ್ದು ಮಹಿಳೆ ಸಾವು, ಗಂಟಲು ಸೀಳಿತ್ತು ಮಾಂಗಲ್ಯಸರ

ನವದೆಹಲಿ: ಮಹಿಳೆಯೊಬ್ಬರು ಮೆಟ್ಟಿಲಿಂದ ಇಳಿಯುವಾಗ ಜಾರಿ ಬಿದ್ದಿದ್ದು, ಈ ವೇಳೆ ಮಾಂಗಲ್ಯಸರ ಗಂಟಲು ಸೀಳಿ ಮೃತಪಟ್ಟಿದ್ದಾರೆ.

ದೆಹಲಿಯ ಗಾಂಧಿನಗರ ಪ್ರದೇಶದಲ್ಲಿ ಶುಕ್ರವಾರ 22 ವರ್ಷದ ಮಹಿಳೆಯೊಬ್ಬರು ತಮ್ಮ ಮನೆಯ ಮೆಟ್ಟಿಲುಗಳಿಂದ ಬಿದ್ದು ಸಾವನ್ನಪ್ಪಿದ್ದಾರೆ. ಮೆಟ್ಟಿಲುಗಳ ಮೇಲೆ ಜಾರಿಬಿದ್ದು, ಮಂಗಳಸೂತ್ರ ಆಕೆಯ ಕುತ್ತಿಗೆ ಸೀಳಿದ ಕಾರಣ ಸಾವನ್ನಪ್ಪಿದ್ದಾರೆ. ಮಂಗಳಸೂತ್ರ ಆಕೆಯ ಕುತ್ತಿಗೆಗೆ ಸಿಕ್ಕಿಹಾಕಿಕೊಂಡಿದೆ. ಬಳಿಕ ಆಕೆ ಗಾಯಗೊಂಡು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಧಿನಗರದ ರಘುವೀರ್ ಪುರ 2ರ ಲೇನ್ 4ರ ಮನೆಯಲ್ಲಿ ಮಹಿಳೆಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಮಧ್ಯಾಹ್ನ 12.39ಕ್ಕೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮಹಿಳೆ ರಾಧಾ ದೇವಿ ಮೆಟ್ಟಿಲುಗಳ ಮೇಲೆ ಮಲಗಿದ್ದು ಆಕೆಯ ಗಂಟಲಿನ ಮೇಲೆ ಗಾಯದ ಗುರುತುಗಳು ಕಂಡಿವೆ.

ಘಟನೆಯ ಸಮಯದಲ್ಲಿ ಮಹಿಳೆಯ ನಾಲ್ಕು ವರ್ಷದ ಮಗ ಅವಳೊಂದಿಗೆ ಇದ್ದ. ತನ್ನ ತಾಯಿ ಬಟ್ಟೆ ಒಣಗಲು ಟೆರೇಸ್‌ ಗೆ ಹೋಗಿದ್ದು, ಕೆಳಗೆ ಬರುವಾಗ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಆಕೆಯ ಗಂಟಲಿನ ಮೇಲೆ ಗಾಯದ ಗುರುತುಗಳಿದ್ದವು. ಅವಳು ಮೆಟ್ಟಿಲುಗಳಿಂದ ಬಿದ್ದಾಗ, ಅವಳು ಧರಿಸಿದ್ದ ಲಾಕೆಟ್‌ ನಿಂದ ಅವಳ ಗಂಟಲಿನ ಮೇಲೆ ಆಳವಾದ ಗಾಯವಾಗಿದೆ.

ಮಗ ಕಟ್ಟಡದಲ್ಲಿದ್ದ ಇತರ ಬಾಡಿಗೆದಾರರಿಗೆ ವಿಷಯ ತಿಳಿಸಿದ ನಂತರ ಅವರು ಮಹಿಳೆಯ ಪತಿಗೆ ಕರೆ ಮಾಡಿದ್ದಾರೆ. ರಘುಬೀರ್ ಪುರದಲ್ಲಿ ಟೈಲರ್ ಆಗಿರುವ ಆಕೆಯ ಪತಿ ಅನಿಲ್ ಪಾಸ್ವಾನ್ ಘಟನೆಯ ವೇಳೆ ಕೆಲಸಕ್ಕೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬವು ಬಿಹಾರದ ಮಧುಬನಿಯ ಕೋಥಿಯಾ ಗ್ರಾಮದಿಂದ ಇಲ್ಲಿಗೆ ಬಂದು ನೆಲೆಸಿತ್ತು.

ಘಟನಾ ಸ್ಥಳಕ್ಕೆ ಅಪರಾಧ ತಂಡಗಳು ಮತ್ತು ವಿಧಿವಿಜ್ಞಾನ ತಂಡಗಳು ಭೇಟಿ ನೀಡಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಟಿಬಿ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...