alex Certify ಅನಾರೋಗ್ಯದಿಂದ ಬೇಸತ್ತ ವೃದ್ಧ ದಂಪತಿಯಿಂದ ಕಠಿಣ ನಿರ್ಧಾರ; ಮನೆಗೆ ಬಂದ ಪುತ್ರಿಗೆ ಕಾದಿತ್ತು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾರೋಗ್ಯದಿಂದ ಬೇಸತ್ತ ವೃದ್ಧ ದಂಪತಿಯಿಂದ ಕಠಿಣ ನಿರ್ಧಾರ; ಮನೆಗೆ ಬಂದ ಪುತ್ರಿಗೆ ಕಾದಿತ್ತು ಶಾಕ್​..!

ಡೆತ್​ ನೋಟ್​ ಬರೆದಿಟ್ಟು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆಯು ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ನಡೆದಿದೆ. ದಂಪತಿಯ ಪುತ್ರಿ ಅಂಕಿತಾ ಎಂಬವರು ಪೊಲೀಸರಿಗೆ ನೀಡಿದ ಮಾಹಿತಿ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ದಂಪತಿಯನ್ನು ನೋಡಿಕೊಳ್ತಿದ್ದ ಅಜಿತ್​ ಎಂಬವರು ಪ್ರತಿ ದಿನದಂತೆ ಮಧ್ಯಾಹ್ನದ ವೇಳೆಗೆ ವೃದ್ಧ ದಂಪತಿ ವಾಸವಿದ್ದ ಮನೆಗೆ ತೆರಳಿದ್ದಾರೆ. ಅನೇಕ ಬಾರಿ ಡೋರ್​ ಬೆಲ್​ ಬಾರಿಸಿದರೂ ಯಾರೂ ಬಾಗಿಲು ತೆಗೆಯದ್ದನ್ನು ನೋಡಿ ಅಜಿತ್, ದಂಪತಿಯ ಪುತ್ರಿ ಅಂಕಿತಾಗೆ ಫೋನಾಯಿಸಿದ್ದರು.

ಅಂಕಿತಾ ಸ್ಥಳಕ್ಕೆ ಆಗಮಿಸಿದ ಬಳಿಕ ಇಬ್ಬರೂ ಸೇರಿ ಮನೆಯ ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ ಅವರಿಗೆ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ. ಮೃತ ರಾಕೇಶ್​ ಕುಮಾರ್​ ಜೈನ್​ಗೆ 74 ವರ್ಷ ವಯಸ್ಸಾಗಿದ್ದರೆ ಉಷಾ ರಾಕೇಶ್​ ಕುಮಾರ್​​ಗೆ 69 ವರ್ಷ ವಯಸ್ಸಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಟೇಬಲ್​ ಮೇಲೆ ಡೆತ್​ ನೋಟ್​ ಸಿಕ್ಕಿದ್ದು, ಇದರಲ್ಲಿ ದಂಪತಿ ಆತ್ಮಹತ್ಯೆಗೆ ಕಾರಣವನ್ನು ತಿಳಿಸಿದ್ದಾರೆ.

ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಈ ದಂಪತಿ ತಮ್ಮ ಜೀವನದ ಬಗ್ಗೆ ಜಿಗುಪ್ಸೆ ಹೊಂದಿದ್ದರು. ಇದೇ ಕಾರಣಕ್ಕಾಗಿ ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದರು ಎಂದು ಬರೆಯಲಾಗಿದೆ.

ಮೃತ ದಂಪತಿಯ ಮೃತದೇಹಗಳನ್ನು ಏಮ್ಸ್​ ಶವಾಗಾರದಲ್ಲಿಟ್ಟು ಬಳಿಕ ಕುಟುಂಬಸ್ಥರಿಗೆ ನೀಡಲಾಗಿದೆ. ಈ ಪ್ರಕರಣದಲ್ಲಿ ಶಂಕೆ ಪಡುವಂತಹ ಯಾವುದೇ ವಿಚಾರಗಳು ಪೊಲೀಸರಿಗೆ ಪತ್ತೆಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...