alex Certify ʼಓಣಂʼ ಹಬ್ಬದ ಪ್ರಯುಕ್ತ ವಿಶೇಷ ಸ್ಪರ್ಧೆ ಆಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಓಣಂʼ ಹಬ್ಬದ ಪ್ರಯುಕ್ತ ವಿಶೇಷ ಸ್ಪರ್ಧೆ ಆಯೋಜನೆ

ಭಾರತದ ಪ್ರಸಿದ್ಧ ಅಗರಬತ್ತಿ ಕಂಪನಿ ಸೈಕಲ್​ ಪ್ಯೂರ್​​ ಈ ಬಾರಿಯ ಓಣಂ ಹಬ್ಬದ ನಿಮಿತ್ತ ಜನತೆಗೆ ಸ್ಪರ್ಧೆಯೊಂದನ್ನು ಆಯೋಜಿಸಿದೆ. ಮನೆಯಲ್ಲಿಯೇ ಸುರಕ್ಷಿತವಾಗಿ ಹಬ್ಬವನ್ನು ಆಚರಿಸಿ ಎಂದಿರುವ ಈ ಕಂಪನಿಯು ಪೂಕಾಲಂ ಸ್ಪರ್ಧೆಯನ್ನು ಆಯೋಜಿಸಿದೆ.

ಓಣಂ ಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ ಈ ಸ್ಪರ್ಧೆಯಲ್ಲಿ ಯಾರು ಬೇಕಿದ್ದರೂ ಭಾಗಿಯಾಗಬಹುದಾಗಿದೆ. ಆಗಸ್ಟ್​ 12 ರಿಂದ ಆರಂಭವಾಗುವ ಸ್ಪರ್ಧೆಯು ಆಗಸ್ಟ್​ 23ರವರೆಗೂ ಇರಲಿದೆ.

ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೆ. ನಿಮ್ಮ ಮನೆಯಲ್ಲಿ ಬಿಡಿಸಲಾದ ಪೂಕಾಲಂನಲ್ಲಿ ಸೈಕಲ್​ ಬ್ರ್ಯಾಂಡ್​ನ ಉತ್ಪನ್ನಗಳನ್ನು ಇಟ್ಟು ಅದನ್ನು hashtags #OnamWithCycle #PookalamContest #CYCLEdotIN #Prayers #PrayForIndia #PrayForKerala ಹ್ಯಾಶ್​ಟ್ಯಾಗ್​ಗಳ ಜೊತೆಯಲ್ಲಿ ಸೈಕಲ್​ ಪ್ಯೂರ್​ನ ಅಧಿಕೃತ ಫೇಸ್​ಬುಕ್​ ಖಾತೆಗೆ ಟ್ಯಾಗ್​ ಮಾಡಬೇಕು. ಕಂಪನಿಯು ಆಗಸ್ಟ್​ 25ರಂದು ಐವರು ವಿಜೇತರ ಹೆಸರನ್ನು ಘೋಷಣೆ ಮಾಡಲಿದೆ.

ಇನ್ನು ಈ ಸ್ಪರ್ಧೆಯ ವಿಚಾರವಾಗಿ ಮಾತನಾಡಿದ ಸೈಕಲ್​ ಪ್ಯೂರ್​ ಮ್ಯಾನೇಜಿಂಗ್​ ಡೈರೆಕ್ಟರ್​ ಅರ್ಜುನ್​ ರಂಗ, ನಾವು ಈ ಬಾರಿಯ ಹಬ್ಬವನ್ನು ಗ್ರಾಹಕರ ಜೊತೆ ವಿಶೇಷವಾಗಿ ಆಚರಿಸಲು ಬಯಸುತ್ತೇವೆ. ಓಣಂ ಹಬ್ಬದ ಪ್ರಯುಕ್ತ ಗ್ರಾಹಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನಾವು ವೇದಿಕೆಯನ್ನು ಕಲ್ಪಿಸುತ್ತಿದ್ದೇವೆ. ಪ್ರತಿಯೊಬ್ಬರು ಮನೆಯಲ್ಲಿಯೇ ಸುರಕ್ಷಿತವಾಗಿ ಹಬ್ಬವನ್ನು ಆಚರಿಸಿ ಎಂದು ಹೇಳಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...