alex Certify ಮಳೆ ಬಂದಾಗಲೇ ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್‌ ತಗುಲಿ ಮೂವರ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆ ಬಂದಾಗಲೇ ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್‌ ತಗುಲಿ ಮೂವರ ಸಾವು

ಮಳೆ ಬಂದು ಮನೆಗೆ ನೀರು ನುಗ್ಗಿರುವಾಗ, ಫೋನ್ ಚಾರ್ಜ್ ಮಾಡಿಕೊಳ್ಳುವವರಿಗೆ ಇಲ್ಲೊಂದು ಎಚ್ಚರಿಕೆ ಇದೆ, ಗಮನಿಸಿ.

ಮಳೆನೀರು ಮನೆಗೆ ನುಗ್ಗಿದಾಗ, ಫೋನ್ ಚಾರ್ಜ್ ಮಾಡಿಕೊಳ್ಳಲು ಹೋಗಿ ಗಂಡ, ಹೆಂಡತಿ ಮತ್ತು ಮಗ ಮೂವರು ವಿದ್ಯುತ್ ತಗಲಿ ಮೃತಪಟ್ಟಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ ಬರಾಕ್ ಪುರ್ ನಗರದ ಖರದಹ ಪ್ರದೇಶದಲ್ಲಿ ನಡೆದಿದೆ.

ಘಟನೆಯು ಕೋಲ್ಕತ್ತಾ ನಗರದಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿ ಇರುವ ಖರದಹ ಪ್ರದೇಶದಲ್ಲಿ ನಡೆದಿದೆ. ಜೋರು ಮಳೆಯಿಂದಾಗಿ ರಸ್ತೆ ತುಂಬಾ ನೀರು ನಿಂತಿದ್ದು, ಮನೆಯೊಳಗೆಲ್ಲಾ ನೀರು ನುಗ್ಗಿದೆ. ಇಲ್ಲಿ ವಾಸಿಸುತ್ತಿದ್ದ, ರಾಜ ದಾಸ್ ಮತ್ತು ಅವನ ಕುಟುಂಬ ವಿದ್ಯುತ್ ತಗುಲಿ ಅಸುನೀಗಿದ್ದಾರೆ. ಪೊಲೀಸರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಇವರುಗಳ ಹೆಣ ತೆಗೆಯಬೇಕಾಯ್ತು.

ರಾಜ ದಾಸ್ ಮೊಬೈಲ್ ಚಾರ್ಜ್ ಮಾಡಲು ಹೋಗಿ, ವಿದ್ಯುತ್ ತಗುಲಿ ಸತ್ತಿದ್ದು, ಇವನನ್ನು ಕಾಪಾಡಲು ಹೋದ ಆತನ ಹೆಂಡತಿ ಮತ್ತು ಹತ್ತು ವರ್ಷದ ಮಗ ಸೇರಿ ಮೂವರೂ ಪ್ರಾಣತೆತ್ತಿದ್ದಾರೆ. ಇವರ ನಾಲ್ಕು ವರ್ಷದ ಮಗ ಮಂಚದಲ್ಲೇ ಕೂತಿದ್ದು , ಅವನು ಕಿರುಚಿಕೊಂಡಾಗಲೇ ನೆರೆಹೊರೆಯವರಿಗೆ ಈ ವಿಷಯ ತಿಳಿದು ಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...