alex Certify BIG NEWS: 32 ಮಂದಿ ಜೀವ ತೆಗೆದ ಕೊರೋನಾ, ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 32 ಮಂದಿ ಜೀವ ತೆಗೆದ ಕೊರೋನಾ, ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1610 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 29,16,927 ಕ್ಕೆ ಏರಿಕೆಯಾಗಿದೆ. ಇವತ್ತು 1640 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,55,862 ಜನ ಗುಣಮುಖರಾಗಿದ್ದಾರೆ. ಇಂದು 32 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 36,773 ಜನ ಸಾವನ್ನಪ್ಪಿದ್ದಾರೆ. 24,266 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.08 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 357 ಜನರಿಗೆ ಕೊರೊನಾ ಸೋಂಕು ತಗಲಿದ್ದು, 5 ಮಂದಿ ಮೃತಪಟ್ಟಿದ್ದಾರೆ. 400 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 8512 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಮಾಹಿತಿ:

ಬಾಗಲಕೋಟೆ 0, ಬಳ್ಳಾರಿ 9, ಬೀದರ್ , ಚಿಕ್ಕಬಳ್ಳಾಪುರ 6, ದಾವಣಗೆರೆ 8, ಗದಗ 3 ಹಾವೇರಿ  8, ಕಲಬುರಗಿ 4, ಕೊಪ್ಪಳ 2, ರಾಮನಗರ 5, ವಿಜಯಪುರ 2, ಯಾದಗಿರಿ 0 ಪ್ರಕರಣ ದಾಖಲಾಗಿವೆ.

ಬೆಂಗಳೂರು ನಗರದಲ್ಲಿ 357, ದಕ್ಷಿಣಕನ್ನಡ 342, ಹಾಸನ 129, ಕೊಡಗು 81, ಮೈಸೂರು 141, ಉಡುಪಿ 131 ಜನರಿಗೆ ಹೊಸದಾಗಿ ಸೋಂಕು ತಗುಲಿದೆ.

ಬೆಳಗಾವಿ1, ಬೆಂಗಳೂರು 5, ದಕ್ಷಿಣಕನ್ನಡ 4, ದಾವಣಗೆರೆ 1, ಧಾರವಾಡ 2, ಹಾವೇರಿ 1, ಹಾಸನ 6, ಕೋಲಾರ 5, ಮಂಡ್ಯ 2, ಮೈಸೂರು 1, ರಾಮನಗರ 1, ಉಡುಪಿ 2, ವಿಜಯಪುರ 1 ಸೇರಿದಂತೆ ರಾಜ್ಯದಲ್ಲಿ ಇಂದು 32 ಸೋಂಕಿತರು ಮತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...