alex Certify 2 ಕೋಟಿ ರೂ. ವೆಚ್ಚದಲ್ಲಿ ಸಿದ್ದಿ ವಿನಾಯಕ ದೇವಾಲಯ ನಿರ್ಮಿಸಿದ ಕ್ರಿಶ್ಚಿಯನ್​ ವ್ಯಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ಕೋಟಿ ರೂ. ವೆಚ್ಚದಲ್ಲಿ ಸಿದ್ದಿ ವಿನಾಯಕ ದೇವಾಲಯ ನಿರ್ಮಿಸಿದ ಕ್ರಿಶ್ಚಿಯನ್​ ವ್ಯಕ್ತಿ..!

ತನ್ನ ಯಶಸ್ಸಿಗೆ ಹಿಂದೂ ದೇವರೇ ಕಾರಣ ಎಂದು ನಂಬಿದ ಕ್ರಿಶ್ಚಿಯನ್​ ಉದ್ಯಮಿ ಉಡುಪಿ ಜಿಲ್ಲೆಯ ತನ್ನ ತವರಾದ ಶಿರ್ವಾದಲ್ಲಿ ಗಣೇಶ ದೇವಾಲಯವನ್ನ ನಿರ್ಮಿಸಿದ್ದಾರೆ.

ಗೇಬ್ರಿಯಲ್​ ಎಫ್​ ನಜರೆತ್​​ ಎಂಬವರು ತಮ್ಮ ಪೂರ್ವಜರ ಭೂಮಿಯಲ್ಲಿ ದೇವಾಲಯವನ್ನ ನಿರ್ಮಿಸಿದ್ದಾರೆ.

10ನೇ ತರಗತಿ ವ್ಯಾಸಂಗ ಮುಗಿದ ಬಳಿಕ ಗೇಬ್ರಿಯಲ್​​ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದರು. ಇಲ್ಲಿ ಅವರು ಉದ್ಯಮವನ್ನ ಆರಂಭಿಸಿದ್ರು.

ಗೇಬ್ರಿಯಲ್​ ಹಾಗೂ ಗಣಪತಿ ನಡುವಿನ ಬಾಂಧವ್ಯ 55 ವರ್ಷಕ್ಕೂ ಹಳೆಯದು. ಮುಂಬೈನಲ್ಲಿ ನೆಲೆಸಿದ್ದ ಗೇಬ್ರಿಯಲ್ ನಿತ್ಯವು ವಿನಾಯಕ ದೇಗುಲಕ್ಕೆ ನಮಿಸುತ್ತಿದ್ದರು, ದಶಕಗಳ ಬಳಿಕ ತವರಿಗೆ ವಾಪಸ್ಸಾಗಿರುವ ಅವರು ತಮ್ಮ ಸ್ವಂತ ಜಮೀನಿನಲ್ಲಿ ವಿನಾಯಕ ದೇಗುಲ ನಿರ್ಮಿಸಿದ್ದಾರೆ.

ಗೇಬ್ರಿಯಲ್​​ರ ಗಣಪತಿ ದೇವರ ಭಕ್ತಿ ಬಗ್ಗೆ ಮಾತನಾಡಿದ ಸ್ನೇಹಿತ ಪುಂಡಲಿಕ ಮರಾಠೆ, ಉಡುಪಿಯ ಅಮ್ಮಣ್ಣಿ ರಮಣ ಶೆಟ್ಟಿ ಮೆಮೋರಿಯಲ್​​ ಹಾಲ್​ನಲ್ಲಿ ನಿರ್ಮಿಸಿದ್ದ ಗಣಪತಿ ದೇಗುಲವನ್ನ ಗೇಬ್ರಿಯಲ್​​ ಇಷ್ಟಪಟ್ಟಿದ್ದರು. ಅದೇ ರೀತಿ 36 ಇಂಚಿನ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿ ಧಾರ್ಮಿಕ ಕಾರ್ಯಗಳನ್ನ ನಡೆಸಲು ಹಾಲ್​ನ್ನು ನಿರ್ಮಿಸಿದ್ದಾರೆ ಎಂದು ಹೇಳಿದ್ದಾರೆ.

ಕೊರೊನಾದಿಂದಾಗಿ ಗಣಪತಿ ದೇಗುಲ ಪ್ರತಿಷ್ಟಾಪನಾ ಕಾರ್ಯಕ್ರಮ ವಿಳಂಬವಾಯ್ತು. ಪ್ರತಿಷ್ಟ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನ ಕಳೆದ ವಾರ ನಡೆಸಲಾಗಿದೆ. ಈ ದೇಗುಲಕ್ಕೆ ಪಾಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥ ಸ್ವಾಮೀಜಿಗಳು ಭೇಟಿ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...