alex Certify ಮನಮೆಚ್ಚುವಂತಿದೆ ಮಕ್ಕಳು ಮಾಡಿರುವ ಈ ಕೆಲಸ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಮೆಚ್ಚುವಂತಿದೆ ಮಕ್ಕಳು ಮಾಡಿರುವ ಈ ಕೆಲಸ​

ವ್ಯವಸ್ಥೆಯ ದೋಷ, ಸ್ಥಳೀಯರ ನಿರ್ಲಕ್ಷ್ಯ ದಿಂದ ಕಸದ ತೊಟ್ಟಿಯಂತಿದ್ದ ಪ್ರದೇಶವನ್ನು ಮಕ್ಕಳು ಸೇರಿ ಗ್ರೀನ್​ ಪಾರ್ಕ್​ ಮಾಡಿ ಗಮನ ಸೆಳೆದಿದ್ದಾರೆ.
ಇದು ನಡೆದಿರುವುದು ಕೊಲ್ಕೊತ್ತಾದಲ್ಲಿ. ಸಬುಜ್​ ದ್ವೀಪ್​ ವಾರ್ಡ್​ 65 ಕೋಲ್ಕತ್ತಾ ನಗರದ ಹೃದಯಭಾಗದಲ್ಲಿರುವ ದಟ್ಟವಾದ ಜನನಿಬಿಡ ಕೊಳೆಗೇರಿಯಾಗಿದೆ.

ಈ ಜಾಗವು ಮೊದಲು ಕೊಳವಾಗಿತ್ತು, ಅದರಲ್ಲಿ ಕಟ್ಟಡದ ಕಸ ಮತ್ತು ಮನೆಯ ತ್ಯಾಜ್ಯದಂತಹ ಅವಶೇಷಗಳನ್ನು ಸುರಿಯಲಾಗುತ್ತಿತ್ತು, ಇದರಿಂದಾಗಿ ಅದನ್ನು ತೆರೆದ ಘನತ್ಯಾಜ್ಯ ವಿಲೇವಾರಿ ಮೈದಾನವಾಗಿ ಪರಿವರ್ತಿಸಲಾಯಿತು.

ಆದರೆ ಅಲ್ಲೇ ಅರ್ಬನ್​ ಪ್ರೈಮರಿ ಹೆಲ್ತ್​ ಸೆಂಟರ್​ ಇದ್ದು, ಮಕ್ಕಳು, ಹಿರಿಯ ನಾಗರಿಕರು, ಈ ಕೇಂದ್ರಕ್ಕೆ ಭೇಟಿ ನೀಡುವ ರೋಗಿಗಳು, ಆರೋಗ್ಯ ಸಿಬ್ಬಂದಿಗೆ ಇದು ಅನೆೈರ್ಮಲ್ಯ ಸ್ಥಳವಾಗಿ ಮಾರ್ಪಟ್ಟಿತು. ಕತ್ತಲಾದ ನಂತರ ಮಾದಕ ವಸ್ತುಗಳ ಸೇವನೆ ಮತ್ತು ಜೂಜಾಟದಲ್ಲಿ ತೊಡಗಿರುವವರ ತಾಣವಾಯಿತು.

ಇದನ್ನು ಗಮನಿಸಿದ ಸಮುದಾಯದ ಕೆಲವು ಗುಂಪುಗಳು ಈ ಪ್ರದೇಶದ ಪರಿವರ್ತನೆಗೆ ಮುಂದಾಯಿತು. ಮಕ್ಕಳು, ಯುವಕರ ಗುಂಪುಗಳಿಗೆ ತಾಯಂದಿರ ಗುಂಪುಗಳ ಸಮುದಾಯ ಗುಂಪು, ಸುತ್ತಮುತ್ತಲಿನ ಮನೆಗಳ ನಿವಾಸಿಗಳು, ವಾರ್ಡ್​ ಸಿಬ್ಬಂದಿ ಬೆಂಬಲವಾಗಿ ನಿಂತರು.

ಈ ಜಾಗದಲ್ಲಿ ಕಸ ಎಸೆಯುವುದನ್ನು ನಿಲ್ಲಿಸಲು ಸಮುದಾಯವನ್ನು ಪ್ರೇರೇಪಿಸುವ ಕೆಲಸ ನಡೆಯಿತು. ಬಳಿಕ ಆ ಪ್ರದೇಶವನ್ನು ಹಸಿರಿನ ಓಯಸಿಸ್​ ಆಗಿ ಪರಿವರ್ತಿಸುವ ಆಲೋಚನೆ ಹೊರಹೊಮ್ಮಿತು.

ಈ ಪ್ರಯಾಣವು ಹಲವಾರು ತಿರುವುಗಳು ಮತ್ತು ಮೈಲುಗಲ್ಲುಗಳಿಗೆ ಸಾಕ್ಷಿಯಾಯಿತು. ಗ್ರೀನ್​ ವುಡ್​ ಎಂಬ ಸಂಸ್ಥೆ ಕೈ ಜೋಡಿಸಿತು.

ಆ ಪ್ರದೇಶ ಸ್ವಚ್ಛಗೊಳಿಸಿ ಅಂತಿಮವಾಗಿ ಸಂಪೂರ್ಣ ಜಾಗವನ್ನು ನವೀನ ವಿನ್ಯಾಸಗೊಂಡಿದೆ. ಇದೀಗ ಆ ಪ್ರದೇಶ ಡಂಪ್​ ಯಾರ್ಡ್​ ಆಗಿತ್ತೇ ಎನ್ನುವಷ್ಟು ಬದಲಾವಣೆ ಕಾಣಿಸಿದೆ. ಜನರ ಅಚ್ಚುಮೆಚ್ಚಿನ ಪ್ರದೇಶ ಕೂಡ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...