alex Certify ರೈತರ ನಿದ್ದೆಗೆಡಿಸಿದ್ದ ದಾಳಿಂಬೆ ಕಳ್ಳರು, ಖರೀದಿಸಿದ ವ್ಯಾಪಾರಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ನಿದ್ದೆಗೆಡಿಸಿದ್ದ ದಾಳಿಂಬೆ ಕಳ್ಳರು, ಖರೀದಿಸಿದ ವ್ಯಾಪಾರಿಗಳು ಅರೆಸ್ಟ್

ಚಿಕ್ಕಬಳ್ಳಾಪುರ: ರೈತರ ನಿದ್ದೆ ಕೆಡಿಸಿದ್ದ ದಾಳಿಂಬೆ ಕಳ್ಳರು ಮತ್ತು ಕಳ್ಳರಿಂದ ದಾಳಿಂಬೆ ಖರೀದಿ ಮಾಡಿದ್ದ ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಕ್ರಾಸ್, ಅಜ್ಜಾವರ, ಚದಲಪುರ, ಸಾಧೇನಹಳ್ಳಿ, ಪಟ್ಟೆನಹಳ್ಳಿ, ನಾಯನಹಳ್ಳಿ ಮೊದಲಾದ ಕಡೆಗಳಲ್ಲಿ ತೋಟಗಳಲ್ಲಿ ರೈತರು ಬೆಳೆದಿದ್ದ ದಾಳಿಂಬೆ ಕಳ್ಳತನ ಮಾಡಲಾಗಿತ್ತು. ಇದರಿಂದಾಗಿ ರೈತರು ಕಂಗಾಲಾಗಿದ್ದರು. ಕಾರ್ಯಾಚರಣೆ ನಡೆಸಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಚಿಕ್ಕಬಳ್ಳಾಪುರ ತಾಲೂಕಿನ ಕರ್ಲಹಳ್ಳಿ ಗ್ರಾಮದ ಕೆ.ಬಿ. ರಾಜು(23) ಮತ್ತು ಶ್ರೀಕಾಂತ್(19) ಎಂಬುವರನ್ನು ಬಂಧಿಸಿದ್ದಾರೆ.

ಮೋಜು ಮಸ್ತಿ ಮಾಡುತ್ತಿದ್ದ ಇವರು ದುಡಿಮೆ ಮಾಡುವುದನ್ನು ಬಿಟ್ಟು ರೈತರ ದಾಳಿಂಬೆ ತೋಟಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೋಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಇವರಿಂದ ಕಳವು ಮಾಡಿದ ದಾಳಿಂಬೆ ಖರೀದಿಸಿದ ಹಣ್ಣಿನ ವ್ಯಾಪಾರಿಗಳಾದ ನಂಜುಂಡಪ್ಪ, ಸೈಯದ್ ಮನ್ಸೂರ್ ಅವರನ್ನು ಕೂಡ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...