alex Certify ಮಹಿಳೆಯೊಂದಿಗೆ ಮಾತಾಡಿದ್ದಕ್ಕೆ ಮೊಬೈಲ್ ಒಡೆದು ಹಾಕಿ ರೂಂ ಸೇರಿದ ಪತ್ನಿ; ದುಡುಕಿದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯೊಂದಿಗೆ ಮಾತಾಡಿದ್ದಕ್ಕೆ ಮೊಬೈಲ್ ಒಡೆದು ಹಾಕಿ ರೂಂ ಸೇರಿದ ಪತ್ನಿ; ದುಡುಕಿದ ಪತಿ

ಚೆನ್ನೈ: ಪತ್ನಿ ತನ್ನ ಮೊಬೈಲ್ ಒಡೆದು ಮಹಿಳೆಯೊಂದಿಗೆ ಮಾತನಾಡದಂತೆ ನಿರ್ಬಂಧಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ದುರ್ದೈವಿಯನ್ನು ಕೃಷ್ಣ (22) ಎಂದು ಗುರುತಿಸಲಾಗಿದೆ. ಇವರು ಉತ್ತರ ಪ್ರದೇಶ ಮೂಲದವರಾಗಿದ್ದು, ಸುಂಗುವರಛತ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಕೃಷ್ಣ ತನ್ನ ಊರಿನವಳಾದ ಮಹಿಳೆಯನ್ನು ಮದುವೆಯಾಗಿದ್ದ. ಕೃಷ್ಣನ ಪತ್ನಿ ತನ್ನ ಸ್ವಗ್ರಾಮಕ್ಕೆ ಹೋಗಿ ಆರು ತಿಂಗಳ ನಂತರ ಸೋಮವಾರ ಸುಂಗುವರಛತ್ರಕ್ಕೆ ಮರಳಿದ್ದಳು.

ಆರು ತಿಂಗಳ ನಂತರ ದಂಪತಿ ಭೇಟಿಯಾಗುತ್ತಿದ್ದರೂ ಕೃಷ್ಣ ತನ್ನ ಮೊಬೈಲ್ ಫೋನ್‌ ನಲ್ಲಿ ಸಂದೇಶ ಕಳುಹಿಸುತ್ತಿದ್ದ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೂಜಾ ಊಟಕ್ಕೆ ಹೋದಾಗ, ಆಕೆಯ ಪತಿ ಬೇರೆಯವರೊಂದಿಗೆ ಫೋನ್‌ ನಲ್ಲಿ ಮಾತನಾಡುತ್ತಿದ್ದ. ಕೆಲಸ ಮುಗಿದ ಒಂದು ಗಂಟೆಯ ನಂತರವೂ ಮಹಿಳೆಯೊಂದಿಗೆ ಫೋನ್‌ ನಲ್ಲಿ ಮಾತನಾಡುತ್ತಿದ್ದ ಗಂಡನನ್ನು ಪ್ರಶ್ನಿಸಿದಾಗ, ಅವಳು ಸಹೋದ್ಯೋಗಿ ಎಂದು ಕೃಷ್ಣ ತಿಳಿಸಿದ್ದಾನೆ.

ಮಹಿಳೆಯೊಂದಿಗೆ ಗಂಡನಿಗೆ ಪ್ರೇಮ ಸಂಬಂಧವಿದೆ ಎಂದು ಪತ್ನಿ ಆರೋಪಿಸಿದ್ದಾಳೆ. ಇದರಿಂದಾಗಿ ದಂಪತಿ ನಡುವೆ ಜಗಳವಾಗಿದೆ. ಜಗಳದ ವೇಳೆ ಅವನ ಫೋನ್ ಅನ್ನು ಕಸಿದುಕೊಂಡು ಒಡೆದು ಹಾಕಿದ್ದಾಳೆ. ಕೋಣೆಯೊಳಗೆ ಹೋಗಿ ಬಾಗಲು ಹಾಕಿಕೊಂಡಿದ್ದಾಳೆ. ಬೇಸರಗೊಂಡ ಕೃಷ್ಣ ವರಾಂಡಾದಲ್ಲಿ ಸೀಲಿಂಗ್‌ ಗೆ ನೇಣು ಹಾಕಿಕೊಂಡಿದ್ದಾನೆ.

ಅರ್ಧ ಗಂಟೆಯ ನಂತರ ಪೂಜಾ ಬಾಗಿಲು ತೆರೆದಾಗ ಆಕೆಯ ಪತಿ ಸೀಲಿಂಗ್‌ ಗೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಅಕ್ಕಪಕ್ಕದ ಮನೆಯವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...