alex Certify ರಥೋತ್ಸವದ ವೇಳೆ ಅವಘಡ; ನೋಡ ನೋಡುತ್ತಿದ್ದಂತೆ ಮುರಿದು ಬಿದ್ದ ವೀರಭದ್ರೇಶ್ವರ ರಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಥೋತ್ಸವದ ವೇಳೆ ಅವಘಡ; ನೋಡ ನೋಡುತ್ತಿದ್ದಂತೆ ಮುರಿದು ಬಿದ್ದ ವೀರಭದ್ರೇಶ್ವರ ರಥ

ಚಾಮರಾಜನಗರ ಜಿಲ್ಲೆ ಅಮಚವಾಡಿ ಚನ್ನಪ್ಪನಪುರ ಗ್ರಾಮದಲ್ಲಿ ಎರಡು ವರ್ಷಗಳ ಬಳಿಕ ಇಂದು ಹಮ್ಮಿಕೊಳ್ಳಲಾಗಿದ್ದ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ವೇಳೆ ರಥ ಪಲ್ಟಿಯಾದ ಘಟನೆ ನಡೆದಿದೆ.

ರಥೋತ್ಸವಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ದೇವಾಲಯದ ಆವರಣದಲ್ಲಿ ರಥ ಸುತ್ತುವ ವೇಳೆ ಅರ್ಧ ದಾರಿಯಲ್ಲಿ ರಥ ಮಗುಚಿಕೊಂಡಿದೆ. ಒಂದು ಗಾಲಿ ಕಲ್ಲಿನ ಮೇಲೆ ಹತ್ತಿದ ಕಾರಣ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಅದೃಷ್ಟವಶಾತ್ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆರು ಶತಮಾನಗಳಿಗಿಂತಲೂ ಹಳೆಯದಾದ ಈ ದೇವಾಲಯದಲ್ಲಿ ಈ ಹಿಂದಿನಿಂದಲೂ ರಥೋತ್ಸವ ನಡೆದುಕೊಂಡು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...