alex Certify ನಂದಿನಿ ಹಾಲಲ್ಲೂ ಸಂವಿಧಾನ ಜಾಗೃತಿ: ಗ್ರಾಹಕರಿಗೆ ಸಂವಿಧಾನ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂದಿನಿ ಹಾಲಲ್ಲೂ ಸಂವಿಧಾನ ಜಾಗೃತಿ: ಗ್ರಾಹಕರಿಗೆ ಸಂವಿಧಾನ ಮಹತ್ವದ ಮಾಹಿತಿ

ಸಂವಿಧಾನದ 75ನೇ ವರ್ಷಾಚರಣೆ ಅಂಗವಾಗಿ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಚಾಮರಾಜನಗರ ಹಾಲು ಒಕ್ಕೂಟ ಹಾಲಿನ ಪ್ಯಾಕೆಟ್ ಗಳ ಮೇಲೆ ಸಂವಿಧಾನ ಜಾಗೃತಿ ಘೋಷಣೆ ಮುದ್ರಿಸುವ ಮೂಲಕ ಸಂವಿಧಾನದ ಅರಿವು ಮೂಡಿಸಲು ವಿಭಿನ್ನ ಪ್ರಯತ್ನ ನಡೆಸಿದೆ.

ಪ್ರತಿ ಹಾಲಿನ ಪ್ಯಾಕ್ ಗಳ ಮೇಲೆ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ, ಸಂವಿಧಾನ ಸಂಭ್ರಮಿಸೋಣ’ ಎಂದು ಘೋಷ ವಾಕ್ಯ ಮುದ್ರಿಸಲಾಗುತ್ತಿದೆ. ನಂದಿನಿ ಗ್ರಾಹಕರಲ್ಲೂ ಸಂವಿಧಾನ ಜಾಗೃತಿ ಮೂಡಿಸಲಾಗುತ್ತಿದ್ದು, ಈ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಹೆಚ್ಚಿನ ಸಂಖ್ಯೆಯ ಜನರಿಗೆ ಸಂವಿಧಾನದ ಮಹತ್ವ ತಿಳಿಸಲು ಕ್ರಮ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...