alex Certify ಹಣದಾಸೆಗೆ ಕಾರು ಚಾಲಕನ ಬರ್ಬರ ಕೊಲೆ; ನಾಪತ್ತೆಯಾಗಿದ್ದ ಯುವಕ ಅಸ್ಥಿಪಂಜರವಾಗಿ ಪತ್ತೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣದಾಸೆಗೆ ಕಾರು ಚಾಲಕನ ಬರ್ಬರ ಕೊಲೆ; ನಾಪತ್ತೆಯಾಗಿದ್ದ ಯುವಕ ಅಸ್ಥಿಪಂಜರವಾಗಿ ಪತ್ತೆ…..!

ಸುಮಾರು ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕ್ಯಾಬ್​ ಚಾಲಕ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯು ಜಾರ್ಖಂಡ್​ನ ಸೆರೈಕೆಲಾ – ಖಾರ್ಸಾವಾನ್​ ಎಂಬಲ್ಲಿ ನಡೆದಿದೆ.

22 ವರ್ಷದ ರಾಹುಲ್​ ಶ್ರೀವಾತ್ಸವ್​ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಎಂಜಿಎಂ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಇದಾದ ಬಳಿಕ ಅಕ್ಟೋಬರ್​ 3ರಂದು ಅಪಹರಣ ಪ್ರಕರಣವನ್ನೂ ದಾಖಲಿಸಲಾಗಿತ್ತು.

ಈ ಪ್ರಕರಣ ಸಂಬಂಧ 22 ವರ್ಷದ ಶಂಕಿತ ಸುಧೀರ್​ ಕುಮಾರ್​ ಶರ್ಮಾ ಹಾಗೂ ಆತನ ಸಹಚರ ರವೀಂದ್ರ ಮಹಾತೋನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ತನಿಖೆಯ ವೇಳೆ ರಾಹುಲ್​ ಮೊಬೈಲ್​ ಫೋನ್​​ ಸುಧೀರ್ ಶರ್ಮಾ ಬಳಿ ಇರುವ ವಿಚಾರ ಬೆಳಕಿಗೆ ಬಂದಿದೆ.

ತನಿಖೆ ಚುರುಕುಗೊಳಿಸುತ್ತಿದ್ದಂತೆಯೇ ಇಬ್ಬರೂ ರಾಹುಲ್​ ಶ್ರೀವಾತ್ಸವ್​ನನ್ನು ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಆ್ಯಪ್​ ಒಂದರಲ್ಲಿ ಕಾರು ಚಾಲಕನಾಗಿದ್ದ ರಾಹುಲ್​ಗೆ ಸೇರಿದ್ದ ಕಾರನ್ನು ಮಾರುವ ಉದ್ದೇಶದಿಂದ ಆತನನ್ನು ಕೊಲೆ ಮಾಡಿದ್ದಾಗಿ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ.

ರಾಹುಲ್​ನನ್ನು ಕೊಲೆ ಮಾಡಿ ಆತನ ಮೃತದೇಹವನ್ನು ಅರಣ್ಯದಲ್ಲಿ ಬಿಸಾಡಿ ಕಾರು ಹಾಗೂ ರಾಹುಲ್​ಗೆ ಸೇರಿದ ಮೊಬೈಲ್​ ಸಮೇತ ಎಸ್ಕೇಪ್​ ಆಗಿದ್ದರು. ಆರೋಪಿಗಳ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಕಾಡಿನಲ್ಲಿ ರಾಹುಲ್​ ಅಸ್ತಿಪಂಜರವನ್ನು ಪತ್ತೆ ಮಾಡಿದ್ದಾರೆ. ರಾಹುಲ್​ ಕಾರನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...