alex Certify BREAKING: ಸಾಮಾಜಿಕ ಕಾರ್ಯಕರ್ತ ಕುಮಾರ್​ ವಿಶ್ವಾಸ್​ ಗೆ Y ಶ್ರೇಣಿ ಭದ್ರತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಸಾಮಾಜಿಕ ಕಾರ್ಯಕರ್ತ ಕುಮಾರ್​ ವಿಶ್ವಾಸ್​ ಗೆ Y ಶ್ರೇಣಿ ಭದ್ರತೆ…!

ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ಕುಮಾರ್​ ವಿಶ್ವಾಸ್​​ರಿಗೆ ವೈ ಕ್ಯಾಟಗರಿ ಭದ್ರತೆಯನ್ನು ನೀಡಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕುಮಾರ್​ ವಿಶ್ವಾಸ್ ರಿಗೆ ಬೆದರಿಕೆ ಇರುವುದು ಇಂಟೆಲಿಜೆನ್ಸ್​ ಬ್ಯೂರೋದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ವಿರುದ್ಧ ಕುಮಾರ್​ ವಿಶ್ವಾಸ್​ ಇತ್ತೀಚೆಗೆ ನೀಡಿದ ಹೇಳಿಕೆಗಳ ಬೆನ್ನಲ್ಲೇ ಅವರಿಗೆ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಇಂಟೆಲಿಜೆನ್ಸ್​ ಬ್ಯುರೋ ಮಾಹಿತಿ ನೀಡಿದೆ.

ಏನಿದು ವೈ ಕ್ಯಾಟಗಿರಿ ಭದ್ರತೆ..?

ಸಿಆರ್​ಪಿಎಫ್​ ಯೋಧರು ಇನ್ಮುಂದೆ ಕುಮಾರ್​ ವಿಶ್ವಾಸ್​ರ ಸುರಕ್ಷತೆಯ ಜವಾಬ್ದಾರಿಯನ್ನು ವಹಿಸಲಿದ್ದಾರೆ. ವೈ ಕ್ಯಾಟಗಿರಿ ಭದ್ರತೆಯು 8 ಮಂದಿ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಅವರಲ್ಲಿ ಐವರು ರಕ್ಷಕರ ನಿವಾಸದಲ್ಲಿ ಇರುತ್ತಾರೆ.

ಮಾರ್ಗಸೂಚಿಯಂತೆ ಉಳಿದ ಮೂವರು ರಕ್ಷಣೆಯನ್ನು ಪಡೆದುಕೊಂಡ ವ್ಯಕ್ತಿಯು ಎಲ್ಲಿಯೇ ಹೋದರೂ ಮೂರು ಪಾಳಿಗಳಲ್ಲಿ ಅವರೊಂದಿಗೆ ಹೋಗುತ್ತಾರೆ.

ಪ್ರಸಿದ್ಧ ಕವಿ ಹಾಗೂ ಮಾಜಿ ಆಪ್​ ನಾಯಕ ಕುಮಾರ್​ ವಿಶ್ವಾಸ್, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಪ್ರತ್ಯೇಕತಾವಾದಿಗಳೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...