alex Certify BREAKING: ಪಿಎಂ ಭೇಟಿ ವೇಳೆ ಭದ್ರತಾ ಲೋಪ; ನಿ. ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ತನಿಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪಿಎಂ ಭೇಟಿ ವೇಳೆ ಭದ್ರತಾ ಲೋಪ; ನಿ. ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ತನಿಖೆ

ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ ಗೆ ಭೇಟಿ ನೀಡಿದ ವೇಳೆ ಆದ ಭದ್ರತಾ ಲೋಪದ ಕುರಿತು ತನಿಖೆ ನಡೆಸುವ ಸಲುವಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದಲ್ಲಿ ನಾಲ್ವರು ಸದಸ್ಯರ ತಂಡ ರಚಿಸಿದೆ.

ಜನವರಿ 5 ರಂದು ನರೇಂದ್ರ ಮೋದಿಯವರು ಪಂಜಾಬ್‌ ಗೆ ಭೇಟಿ ನೀಡಿದ ವೇಳೆ ರೈತರ ಪ್ರತಿಭಟನೆ ಹಿನ್ನಲೆಯಲ್ಲಿ 20 ನಿಮಿಷಗಳ ಕಾಲ ಅವರಿದ್ದ ವಾಹನ ರಸ್ತೆಯಲ್ಲೇ ನಿಂತಿತ್ತು.

ಪಂಜಾಬ್‌ ಪೊಲೀಸರಿಗೆ ಪ್ರಧಾನಿಯವರು ಭೇಟಿ ನೀಡುತ್ತಾರೆಂಬ ಮಾಹಿತಿ ಇದ್ದರೂ ಸೂಕ್ತ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದರೆಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ತನಿಖೆ ನಡೆಸಲು ಇದೀಗ ಸುಪ್ರೀಂ ಕೋರ್ಟ್‌ ನಾಲ್ವರು ಸದಸ್ಯರ ತಂಡವನ್ನು ನೇಮಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...