alex Certify BIG NEWS: ಚುನಾವಣೆಗೆ ಬಿಜೆಪಿ ರಣಕಹಳೆ: 50 ಕ್ಷೇತ್ರಗಳಲ್ಲಿ ಸಿಎಂ, ಮಾಜಿ ಸಿಎಂ ಪ್ರವಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚುನಾವಣೆಗೆ ಬಿಜೆಪಿ ರಣಕಹಳೆ: 50 ಕ್ಷೇತ್ರಗಳಲ್ಲಿ ಸಿಎಂ, ಮಾಜಿ ಸಿಎಂ ಪ್ರವಾಸ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಲರ್ಟ್ ಆಗಿದ್ದು, ರಾಜ್ಯ ಬಿಜೆಪಿ ಘಟಕದ ನಾಯಕರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಆಂತರಿಕ ಸರ್ವೆ ಪ್ರಕಾರ ಪ್ರವಾಸ ಮಾಡಲು ಬಿಜೆಪಿ ಸಜ್ಜಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲೆಕ್ಷನ್ ಮೂಡ್ ಗೆ ರೆಡಿಯಾಗಿದ್ದು, ಅಕ್ಟೋಬರ್ 11 ರಿಂದ ಕ್ಷೇತ್ರ ಸಂಚಾರಕ್ಕೆ ಸಿದ್ಧವಾಗಿದ್ದಾರೆ. ರಾಯಚೂರಿನಿಂದ ಮುಖ್ಯಮಂತ್ರಿಗಳ ಚುನಾವಣಾ ಪ್ರಚಾರ ಆರಂಭವಾಗಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಿಎಂ ಬೊಮ್ಮಾಯಿ ಕ್ಷೇತ್ರ ಸಂಚಾರ ಕೈಗೊಂಡಿದ್ದಾರೆ. ಮೊದಲ ಹಂತದಲ್ಲಿ ಅಕ್ಟೋಬರ್ 11 ರಿಂದ 13ರವರೆಗೆ ಮುಖ್ಯಮಂತ್ರಿ ಕ್ಷೇತ್ರ ಪ್ರವಾಸ ಕೈಗೊಂಡಿದ್ದು, ರಾಯಚೂರು, ಮಸ್ಕಿ, ಕುಷ್ಟಗಿಯಲ್ಲಿ ಮೊದಲ ಹಂತದ ರ್ಯಾಲಿ ನಡೆಸಲಿದ್ದಾರೆ.

ಬಳಿಕ ಮೂರು ಮೂರು ದಿನ ಬ್ರೇಕ್ ತೆಗೆದುಕೊಳ್ಳಲಿದ್ದು, ಅಕ್ಟೋಬರ್ 17 ರಿಂದ ಎರಡನೇ ಹಂತದಲ್ಲಿ ಕಲಬುರ್ಗಿ ಮತ್ತು ಬೀದರ್ ನಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡು ತಿಂಗಳಲ್ಲಿ 50 ಕ್ಷೇತ್ರಗಳಿಗೆ ಇಬ್ಬರು ನಾಯಕರು ಭೇಟಿ ನೀಡಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...