alex Certify ಬೆಂಬಲಿಗನ ಉದ್ಧಟತನಕ್ಕೆ ಬೆಲೆ ತೆತ್ತ ಬಿಜೆಪಿ ಶಾಸಕ: 4 ಬಾರಿ ಚುನಾವಣೆ ಗೆದ್ದರೂ ಟಿಕೆಟ್​ ʼಮಿಸ್ʼ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಬಲಿಗನ ಉದ್ಧಟತನಕ್ಕೆ ಬೆಲೆ ತೆತ್ತ ಬಿಜೆಪಿ ಶಾಸಕ: 4 ಬಾರಿ ಚುನಾವಣೆ ಗೆದ್ದರೂ ಟಿಕೆಟ್​ ʼಮಿಸ್ʼ​

ಮಧ್ಯಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದೆ. ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಿ ಶಾಸಕ ಕೇದಾರನಾಥ ಶುಕ್ಲಾ ತಮ್ಮ ಬೆಂಬಲಿಗನ ಉದ್ಧಟತನಕ್ಕೆ ತಲೆದಂಡ ತೆರುವಂತೆ ಆಗಿದೆ.

ಹಾಲಿ ಬಿಜೆಪಿ ಶಾಸಕ ಶುಕ್ಲಾರಿಗೆ ಈ ಬಾರಿ ವಿಧಾನಸಭಾ ಟಿಕೆಟ್​ ಮಿಸ್​ ಆಗಿದ್ದು ಸಿಧಿ ಕ್ಷೇತ್ರದ ಟಿಕೆಟ್​ನ್ನು ಹಾಲಿ ಸಂಸದ ರಿತಿ ಪಾಠಕ್​ರಿಗೆ ನೀಡಲಾಗಿದೆ.

ಒಂದೆರಡು ತಿಂಗಳ ಹಿಂದೆ ಸಿಧಿಯಲ್ಲಿ ನಡೆದಿದ್ದ ಅಮಾನವೀಯ ಘಟನೆಗೆ ಶುಕ್ಲಾ ಬೆಲೆ ತೆತ್ತಿರಬಹುದು ಎಂಬ ಅನುಮಾನ ಮೂಡಿದೆ. ಶುಕ್ಲಾ ಬೆಂಬಲಿಗರ ಪೈಕಿ ಒಬ್ಬರಾದ ದಶ್ಮತ್​ ರಾವತ್​ ಎಂಬಾತ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗಿದ್ದು ಅಲ್ಲದೇ ಬಿಜೆಪಿ ಮುಖಂಡ ದಶ್ಮತ್​ ರಾವತ್​ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು.

ಶುಕ್ಲಾರ ಆಪ್ತ ವಲಯದಲ್ಲಿ ದಶ್ಮತ್​ ರಾವತ್​ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಬಿಜೆಪಿಯಿಂದ ಟಿಕೆಟ್​ ನೀಡಿದರೆ ಕಾಂಗ್ರೆಸ್​ ಆದಿವಾಸಿಗಳ ಮೇಲೆ ಬಿಜೆಪಿ ದೌರ್ಜನ್ಯ ನಡೆಸುತ್ತದೆ ಅನ್ನೋದನ್ನೇ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿದ ಬಿಜೆಪಿ ಹೈಕಮಾಂಡ್​ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...