alex Certify BIG NEWS: 14 ಕಾಯಿಲೆಗಳ ಪಟ್ಟಿ ಕೊಟ್ಟು ಬೇಲ್ ಗಾಗಿ ಮನವಿ ಮಾಡಿದ ವಂಚಕ ಯುವರಾಜ್ ಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 14 ಕಾಯಿಲೆಗಳ ಪಟ್ಟಿ ಕೊಟ್ಟು ಬೇಲ್ ಗಾಗಿ ಮನವಿ ಮಾಡಿದ ವಂಚಕ ಯುವರಾಜ್ ಸ್ವಾಮಿ

ಬೆಂಗಳೂರು: ರಾಜಕಾರಣಿಗಳ ಪರಿಚಯವಿದೆ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ಕೋಟ್ಯಂತರ ರೂಪಾಯಿ ವಂಚಿಸಿದ್ದ ಯುವರಾಜ್ ಸ್ವಾಮಿ ಸದ್ಯ ಜೈಲುಪಾಲಾಗಿದ್ದು, ಕಾಯಿಲೆಗಳ ಪಟ್ಟಿಯನ್ನೇ ನೀಡಿ ಜಾಮೀನು ನೀಡುವಂತೆ ಮನವಿ ಸಲ್ಲಿಸಿದ್ದಾನೆ.

ಜೈಲು ಆಸ್ಪತ್ರೆಯಲ್ಲಿಯೇ ಪರೀಕ್ಷೆ ಮಾಡಿಸಿ ವರದಿ ಪಡೆದಿರುವ ಯುವರಾಜ್ ಸ್ವಾಮಿ, ತಾನು 7-8 ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ.

ಶಾಕಿಂಗ್ ನ್ಯೂಸ್: ಮನೆಯಲ್ಲೇ ಸ್ನೇಹಿತನೊಂದಿಗೆ ಪಾರ್ಟಿ ಮಾಡಿದ ಬಳಿಕ ತಂದೆಯಿಂದಲೇ ನೀಚಕೃತ್ಯ

ಕಳೆದ 7-8 ವರ್ಷಗಳಿಂದ ಅಧಿಕ ರಕ್ತದೊತ್ತಡ, 6 ವರ್ಷಗಳಿಂದ ಮಧುಮೇಹ, ಲಿವರ್ ಸಮಸ್ಯೆ, ಕುತ್ತಿಗೆ, ಬೆನ್ನಿನ ಎಲುಬು ಅತಿಯಾದ ನೋವು, ಗುದದ್ವಾರದಲ್ಲಿ ಬಿರುಕು, ಗ್ಯಾಸ್ಟ್ರಿಕ್, ಐರನ್ ಹಾಗೂ ವಿಟಮಿನ್ ಕೊರತೆ, ಉರಿಯೂತ, ಸಣ್ಣಪ್ರಮಾಣದ ಖಿನ್ನತೆ, ಭುಜದ ಮೂಳೆ ಮುರಿತದ ನೋವು, ವೈರಲ್ ಜ್ವರ ಸೇರಿದಂತೆ ಒಟ್ಟು 14 ಕಾಯಿಲೆಗಳಿಂದ ನಾನು ಬಳಲುತ್ತಿದ್ದು ಚಿಕಿತ್ಸೆಗಾಗಿ 90 ದಿನಗಳ ಕಾಲ ಜಾಮೀನು ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...