alex Certify BIG NEWS: ಹಿಜಾಬ್ ಸಂಘರ್ಷ; ನಿಷೇಧಾಜ್ಞೆ ನಡುವೆಯೂ ಖಡ್ಗ ಹಿಡಿದು ಮೆರವಣಿಗೆ ಮಾಡಿದ ಯುವಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಿಜಾಬ್ ಸಂಘರ್ಷ; ನಿಷೇಧಾಜ್ಞೆ ನಡುವೆಯೂ ಖಡ್ಗ ಹಿಡಿದು ಮೆರವಣಿಗೆ ಮಾಡಿದ ಯುವಕರು

ಬಳ್ಳಾರಿ: ಒಂದೆಡೆ ಬಳ್ಳಾರಿ ಸರಳಾದೇವಿ ಕಾಲೇಜಿನಲ್ಲಿ ಹಿಜಾಬ್ ಸಂಘರ್ಷ ಮುಂದುವರೆದಿದ್ದು, ಇನ್ನೊಂದೆಡೆ ಎ ಐ ಡಿ ಎಸ್ ಒ ಸಂಘಟನೆ ಕಾರ್ಯಕರ್ತರು ಧರ್ಮನಿರಪೇಕ್ಷಣಾ ಶಿಕ್ಷಣ ಬೇಕು ಎಂದು ಗೋಡೆ ಮೇಲೆ ಕೈ ಬರಹ ಬರೆದಿದ್ದಾರೆ. ಮತ್ತೊಂದೆಡೆ ಯುವಕರು ಖಡ್ಗ ಹಿಡಿದು ಬೈಕ್ ರ್ಯಾಲಿ ನಡೆಸಿದ ಘಟನೆ ನಡೆದಿದೆ.

ರಾಜ್ಯದ ಹಲವು ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಬಳ್ಳಾರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಿಷೇಧಾಜ್ಞೆ ನಡುವೆಯೂ ಸರಳಾದೇವಿ ಕಾಲೇಜು ಹಾಗೂ ಮೈದಾನದಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದು, ಚರ್ಚೆಯಲ್ಲಿ ನಿರತರಾಗಿದ್ದಾರೆ.

ವಿವಾದದ ಮಧ್ಯೆಯೇ ಮತ್ತೊಂದೆಡೆ ಸರಳಾದೇವಿ ಕಾಲೇಜು ಮುಂಭಾಗದಲ್ಲಿ ಖಡ್ಗ ಹಿಡಿದು ಯುವಕರು ಮೆರವಣಿಗೆ ನಡೆಸಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿಯೇ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಶಿವಾಜಿ ಜಯಂತಿ ಅಂಗವಾಗಿ ಖಡ್ಗ ಹಿಡಿದು ಬೈಕ್ ಹಾಗೂ ಕಾರುಗಳಲ್ಲಿ ಮೆರೆವಣಿಗೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...