alex Certify BIG NEWS: ಸ್ವಾಮೀಜಿ ಸೂಚಿಸಿದ ದಿನ ಜನಾರ್ಧನ ರೆಡ್ಡಿ ಬಳ್ಳಾರಿಗೆ; 8 ವಾರದ ನಂತರವೂ ಜಿಲ್ಲೆಯಲ್ಲೇ ವಾಸ ಎಂದ ಶಾಸಕ ಸೋಮಶೇಖರ ರೆಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ವಾಮೀಜಿ ಸೂಚಿಸಿದ ದಿನ ಜನಾರ್ಧನ ರೆಡ್ಡಿ ಬಳ್ಳಾರಿಗೆ; 8 ವಾರದ ನಂತರವೂ ಜಿಲ್ಲೆಯಲ್ಲೇ ವಾಸ ಎಂದ ಶಾಸಕ ಸೋಮಶೇಖರ ರೆಡ್ಡಿ

ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿಗೆ 8 ವಾರಗಳ ಕಾಲ ಬಳ್ಳಾರಿಯಲ್ಲಿರಲು ಸುಪ್ರೀಂ ಕೋರ್ಟ್ ನಿನ್ನೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ರೆಡ್ಡಿ ಬಳ್ಳಾರಿಗೆ ತೆರಳಿ ವರಮಹಾಲಕ್ಷ್ಮಿ ಹಬ್ಬ ಆಚರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಜನಾರ್ಧನ ರೆಡ್ಡಿ ಇಂದು ಬಳ್ಳಾರಿಗೆ ತೆರಳುತ್ತಿಲ್ಲ.

ಈ ಬಗ್ಗೆ ಜನಾರ್ಧನ ರೆಡ್ಡಿ ಸಹೋದರ, ಶಾಸಕ ಸೋಮಶೇಖರ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ಕುಟುಂಬದ ಸ್ವಾಮೀಜಿಗಳು ಹೇಳಿದ ದಿನ ಜನಾರ್ಧನ ರೆಡ್ಡಿ ಬಳ್ಳಾರಿಗೆ ಆಗಮಿಸಲಿದ್ದಾರೆ. ಇಂದು ಬೆಂಗಳೂರಿನಲ್ಲಿಯೇ ವರಮಹಾಲಕ್ಷ್ಮಿ ಹಬ್ಬ ಆಚರಿಸಲಿದ್ದಾರೆ ಎಂದರು.

ಕಂದಾಯ ಅಧಿಕಾರಿಗೆ ಹಿಗ್ಗಾಮುಗ್ಗಾ ನಿಂದಿಸಿದ ಕಾಂಗ್ರೆಸ್​ ಶಾಸಕ..! ಆಡಿಯೋ ವೈರಲ್​

ಈಗ 8 ವಾರ ಕಾಲ ಜನಾರ್ಧನ ರೆಡ್ಡಿಗೆ ಬಳ್ಳಾರಿಯಲ್ಲಿರಲು ಅವಕಾಶ ಸಿಕ್ಕಿದೆ. ಈ 8 ವಾರ ಅಬ್ಸರ್ವೇಷನ್ ಅವಧಿ. ಅದಾದ ಬಳಿಕವೂ ಮುಂದಿನ ದಿನಗಳಲ್ಲಿ ಅವರು ಬಳ್ಳಾರಿಯಲ್ಲಿಯೇ ಇರುತ್ತಾರೆ. ಅವರು ಬಳ್ಳಾರಿಗೆ ಬರುವುದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಅವರ ಆಲೋಚನೆಗಳು ಒಳ್ಳೆಯದಿವೆ. ಒಳ್ಳೆಯ ಆಲೋಚನೆಯಿಂದ ಕೆಲಸ ಮಾಡಿದರೆ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...