alex Certify BIG NEWS: ಸ್ವಯಂಘೋಷಿತವಾಗಿ ತಾವೇ ಘೋಷಣೆ ಮಾಡಿಕೊಳ್ಳುವುದಲ್ಲ; ಪಕ್ಷ ಘೋಷಣೆ ಮಾಡಲಿ; ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ಸುಧಾಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸ್ವಯಂಘೋಷಿತವಾಗಿ ತಾವೇ ಘೋಷಣೆ ಮಾಡಿಕೊಳ್ಳುವುದಲ್ಲ; ಪಕ್ಷ ಘೋಷಣೆ ಮಾಡಲಿ; ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಚಿವ ಸುಧಾಕರ್

ಬೆಂಗಳೂರು: ಸಂವಿಧಾನದ ಪ್ರಕಾರ ಯಾರು ಎಲ್ಲಿಂದಲಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಆದರೆ ನನಗಿರುವ ಅನುಭವದ ಪ್ರಕಾರ ಸಿದ್ದರಾಮಯ್ಯನವರಿಗೆ ಕೋಲಾರದಿಂದ ಒಳ್ಳೆಯದಾಗಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಸಿದ್ದರಾಮಯ್ಯಗೆ ಕೋಲಾರದಲ್ಲಿ ಗೆಲುವು ಬಹಳ ಕಠಿಣವಾಗಲಿದೆ. ಅವರು ಅಂದುಕೊಂಡಂತೆ ಗೆಲುವು ಸಿಗಲಾರದು ಎಂದು ಹೆಳಿದ್ದಾರೆ.

ಇದೇ ವೇಳೆ ನಾನು ಸಿಎಂ ಆಗ್ಬೇಕು ಎಂದರೆ ಕಾಂಗ್ರೆಸ್ ಗೆ ಮತ ನೀಡಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಮೊದಲು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ. ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಎಂದು ಹೇಳಲಿ. ಸ್ವಯಂಘೋಷಿತವಾಗಿ ಸಿದ್ದರಾಮಯ್ಯನವರೇ ಘೋಷಣೆ ಮಾಡಿಕೊಂಡರೆ ಆಗಲ್ಲ. ಪಕ್ಷ ಘೋಷಣೆ ಮಾಡಿದರೆ ಮಾನ್ಯತೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...