alex Certify BIG NEWS: ಸಿಡಿಲು ಬಡಿತಕ್ಕೆ ಚಾಮರಾಜನಗರದಲ್ಲಿ ಇಬ್ಬರು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿಡಿಲು ಬಡಿತಕ್ಕೆ ಚಾಮರಾಜನಗರದಲ್ಲಿ ಇಬ್ಬರು ಬಲಿ

ಚಾಮರಾಜನಗರ: ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಗೆ ಜನ ಜೀವನ‌ ಅಸ್ತವ್ಯಸ್ತ ಆಗೋದ್ರ ಜೊತೆಗೆ ಜೀವ ಹಾನಿಯೂ ಆಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಚಾಮರಾಜನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

ಈ ರಣ ಮಳೆಗೆ ಇದೀಗ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಹೌದು, ಸಿಡಿಲು ಬಡಿದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೆಸ್ತೂರಿನಲ್ಲಿ ರೇವಣ್ಣ(45), ಹಾಗೂ ಹನೂರು ತಾಲೂಕಿನ ಮೀಣ್ಯಂನಲ್ಲಿ ಮಾದಪ್ಪ(64) ಸಾವನ್ನಪ್ಪಿದ್ದಾರೆ.

ರೇವಣ್ಣ ತಮ್ಮ ಜಮೀನಿನಲ್ಲಿ ಭತ್ತದ ನಾಟಿ ಸಂಬಂಧ ಸಿದ್ದತೆಗಾಗಿ ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇನ್ನು ಮಾದಪ್ಪ ಕುರಿ ಕಾಯುತ್ತಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...