alex Certify BIG NEWS: ವಾಸ್ತು ಕೇಳುವ ನೆಪದಲ್ಲಿ ಬಂದವರಿಂದ ನಡೆಯಿತಾ ಚಂದ್ರಶೇಖರ ಗುರೂಜಿ ಹತ್ಯೆ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಸ್ತು ಕೇಳುವ ನೆಪದಲ್ಲಿ ಬಂದವರಿಂದ ನಡೆಯಿತಾ ಚಂದ್ರಶೇಖರ ಗುರೂಜಿ ಹತ್ಯೆ ?

ಸರಳ ವಾಸ್ತು ಮೂಲಕ ಖ್ಯಾತರಾಗಿದ್ದ ಚಂದ್ರಶೇಖರ ಗುರೂಜಿಯವರನ್ನು ಇಂದು ಹಾಡಹಗಲೇ ಹುಬ್ಬಳ್ಳಿಯ ಉಣಕಲ್‌ ಬಳಿಯ ಪ್ರೆಸಿಡೆಂಟ್‌ ಹೋಟೆಲ್‌ ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಾಸ್ತು ಕೇಳುವ ನೆಪದಲ್ಲಿ ಹೋಟೆಲ್‌ ಗೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಈ ಹತ್ಯೆ ಮಾಡಿದ್ದಾರೆ.

ವ್ಯವಹಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದ ಈ ದುಷ್ಕರ್ಮಿಗಳು ಈ ಮೊದಲೇ ಚಂದ್ರಶೇಖರ ಗುರೂಜಿಯವರನ್ನು ಭೇಟಿ ಮಾಡಿದ್ದರೆಂದು ಹೇಳಲಾಗಿದೆ. ಆದರೆ ತಮಗೆ ಯಾವುದೇ ಪರಿಹಾರ ಸಿಗದ ಹಿನ್ನಲೆಯಲ್ಲಿ ಹತಾಶರಾಗಿದ್ದ ಇವರುಗಳು ಭೇಟಿಯಾಗುವ ನೆಪದಲ್ಲಿ ಹೋಟೆಲ್‌ ಗೆ ಭೇಟಿಗಾಗಿ ಬಂದಿದ್ದರೆಂದು ಹೇಳಲಾಗಿದೆ.

ಅವರಿಗಾಗಿಯೇ ಹಂತಕರು ಕಾದು ಕುಳಿತಿದ್ದು, ಅದಕ್ಕೂ ಮುನ್ನ ರಿಸೆಪ್ಶನಿಸ್ಟ್‌ ಮೂಲಕ ತಾವು ಕಾದು ಕುಳಿತಿರುವುದಾಗಿ ತಿಳಿಸಿದ್ದರೆಂದು ಹೇಳಲಾಗಿದೆ. ಹೀಗಾಗಿ ಚಂದ್ರಶೇಖರ ಗುರೂಜಿಯವರು ಕೆಳಗೆ ಬರುತ್ತಿದ್ದಂತೆಯೇ ರಿಸೆಪ್ಶನಿಸ್ಟ್‌ ಹಾಲ್‌ ನಲ್ಲಿಯೇ ಅವರಿಗೆ ಮನಬಂದಂತೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರಬಹುದೆಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...