alex Certify BIG NEWS: ಮುರುಘಾಶ್ರೀ ಪೊಲೀಸರ ವಶಕ್ಕೆ; ಮಠದತ್ತ ಧಾವಿಸಿ ಬಂದ ಭಕ್ತರು; ಮತ್ತೊಂದೆಡೆ ಮೌನ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುರುಘಾಶ್ರೀ ಪೊಲೀಸರ ವಶಕ್ಕೆ; ಮಠದತ್ತ ಧಾವಿಸಿ ಬಂದ ಭಕ್ತರು; ಮತ್ತೊಂದೆಡೆ ಮೌನ ಪ್ರತಿಭಟನೆ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀಗಳನ್ನು ಚಿತ್ರದುರ್ಗ ಪೊಲೀಸರು ಬಂಕಾಪುರ ಹೆದ್ದಾರಿ ಬಳಿ ಶ್ರೀಗಳನ್ನು ವಶಕ್ಕೆ ಪಡೆದಿದ್ದಾರೆ. ಮುರುಘಾಶ್ರೀಗಳನ್ನು ವಶಕ್ಕೆ ಪಡೆದ ವಿಚಾರ ಗೊತ್ತಾಗುತ್ತಿದ್ದಂತೆ ಭಕ್ತಾದಿಗಳು ಮುರುಘಾಮಠದತ್ತ ಧಾವಿಸಿ ಬಂದಿದ್ದಾರೆ.

ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಮುರುಘಾಶ್ರೀ ಡಾ.ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಶ್ರೀಗಳು ಮಹಾರಾಷ್ಟ್ರದತ್ತ ತೆರಳುತ್ತಿದ್ದರು. ಹಾವೇರಿ ಜಿಲ್ಲೆ ಬಂಕಾಪುರದ ಬಳಿ ಮಾರ್ಗ ಮಧ್ಯೆ ಶ್ರೀಗಳನ್ನು ತಡೆದ ಪೊಲೀಸರು ಮುರುಘಾಶ್ರೀಗಳನ್ನು ವಶಕ್ಕೆ ಪಡೆದಿದ್ದಾರೆ.

ಬಳಿಕ ಶ್ರೀಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿತ್ರದುರ್ಗದ ಮಠದತ್ತ ಕರೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ. ಶ್ರೀಗಳು ಪೊಲೀಸರ ವಶಕ್ಕೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಆತಂಕಗೊಂಡ ಭಕ್ತರು ಮುರುಘಾಮಠದತ್ತ ಆಗಮಿಸಿದ್ದು, ಶ್ರೀಗಳನ್ನು ಭೇಟಿಯಾಗಲು ಕಾಯುತ್ತಿದ್ದಾರೆ. ಇನ್ನೊಂದೆಡೆ ಶ್ರೀಗಳ ವಿರುದ್ಧದ ಆರೋಪ ಖಂಡಿಸಿ ಬಸವಪರ ಸಂಘಟನೆ ಮೌನ ಪ್ರತಿಭಟನೆ ನಡೆಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...