alex Certify BIG NEWS: ಮುಖ ತೋರಿಸಿ ತಿಂಡಿ ತಿಂದು ಹೋಗೋದಲ್ಲ; ಪಾದಯಾತ್ರೆಯಲ್ಲಿ ಕೊನೆವರೆಗೂ ಇರಬೇಕು; ಭಾರತ್ ಜೋಡೊ ಯಾತ್ರೆಗೆ ಒಬ್ಬೊಬ್ಬರು 100 ಜನರನ್ನು ಕರೆತರಬೇಕು; ಕಂಡಿಷನ್ ಹಾಕಿದ ಡಿ.ಕೆ.ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮುಖ ತೋರಿಸಿ ತಿಂಡಿ ತಿಂದು ಹೋಗೋದಲ್ಲ; ಪಾದಯಾತ್ರೆಯಲ್ಲಿ ಕೊನೆವರೆಗೂ ಇರಬೇಕು; ಭಾರತ್ ಜೋಡೊ ಯಾತ್ರೆಗೆ ಒಬ್ಬೊಬ್ಬರು 100 ಜನರನ್ನು ಕರೆತರಬೇಕು; ಕಂಡಿಷನ್ ಹಾಕಿದ ಡಿ.ಕೆ.ಶಿ

ಮೈಸೂರು: ಭಾರತ್ ಜೋಡೋ ಯಾತ್ರೆಯಲ್ಲಿ ಹೆಚ್ಚು ಮಹಿಳೆಯರು ಭಾಗಿಯಾಗಬೇಕು. ಮಹಿಳಾ ನಾಯಕಿಯರೊಬ್ಬರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಡಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಬಿಜೆಪಿಯಲ್ಲಿ ನಡುಕ ಹುಟ್ಟಿಸಿತ್ತು. ಹಾಗೇ ಭಾರತ್ ಜೋಡೋ ಪಾದಯಾತ್ರೆ ಕೂಡ ಆಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಬೇಕು. ಮುಖ ತೋರಿಸಿ ತಿಂಡಿ ತಿಂದು ಹೋಗೋದಲ್ಲ. ಪಾದಯಾತ್ರೆಯಲ್ಲಿ ಕೊನೆವರೆಗೂ ಇರಬೇಕು ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬ ಕಾರ್ಯಕರ್ತನೂ ಕೆಲ ದಿನ ಕಷ್ಟಪಡಿ. ಯಾರು ಭಾರತ್ ಜೋಡೋ ಯಾತ್ರೆಗೆ ಬಂದಿದ್ರು ಯಾರು ಬಂದಿಲ್ಲ ಎಂಬುದನ್ನು ಲೆಕ್ಕ ಹಾಕಿಸುತ್ತೇನೆ. ಎಲ್ಲದಕ್ಕೂ ಒಂದೊಂದು ಕಮಿಟಿ ಮಾಡಲಾಗಿದೆ. ಈ ಜಿಲ್ಲೆಯವರು 10-15 ಸಾವಿರ ಜನರನ್ನು ಕರೆದುಕೊಂಡು ಬರಬೇಕು. ಸಿದ್ದರಾಮಯ್ಯ 5 ಸಾವಿರ ಜನರನ್ನು ಕರೆದುಕೊಂಡು ಬನ್ನಿ ಎಂದಿದ್ದಾರೆ. ಅದು ದೂರದ ಜಿಲ್ಲೆಯ ಶಾಸಕರಿಗೆ ಅನ್ವಯಿಸುತ್ತೆ. ಒಬ್ಬೊಬ್ಬ ನಾಯಕ 100 ಜನರನ್ನು ಕರೆದುಕೊಂಡು ಬರಬೇಕು. ಈ ಮೂಲಕ ನೀವು ನಿಮ್ಮ ಮರ್ಯಾದೆ ಕಾಪಾಡಿಕೊಳ್ಳಿ. ನೀವು ಬರದಿದ್ದರೆ ಸಿದ್ದರಾಮಯ್ಯ ಮರ್ಯಾದೆ ಹೋಗುತ್ತೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...