alex Certify BIG NEWS: ಬಂಕರ್ ನಲ್ಲಿ ಅಡಗಿ ಕುಳಿತ 700 ವಿದ್ಯಾರ್ಥಿಗಳು; ಸಹಾಯಕ್ಕಾಗಿ ಭಾರತದ ವಿದ್ಯಾರ್ಥಿನಿ ಮೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಂಕರ್ ನಲ್ಲಿ ಅಡಗಿ ಕುಳಿತ 700 ವಿದ್ಯಾರ್ಥಿಗಳು; ಸಹಾಯಕ್ಕಾಗಿ ಭಾರತದ ವಿದ್ಯಾರ್ಥಿನಿ ಮೊರೆ

ಕೈವ್: ರಷ್ಯಾ ಭೀಕರ ದಾಳಿಗೆ ಉಕ್ರೇನ್ ಸಂಪೂರ್ಣ ನಲುಗಿ ಹೋಗಿದ್ದು, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉಕ್ರೇನ್ ನಲ್ಲಿ ಹಾಸ್ಟೆಲ್ ಒಂದರ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಭಾರತದ ಮೆಡಿಕಲ್ ವಿದ್ಯಾರ್ಥಿನಿ ಸಭ್ಯತಾ ಮಾಹಿತಿ ನೀಡಿದ್ದಾರೆ.

ಪ್ರತಿದಿನ ʼತುಳಸಿʼ ಟೀ ಸೇವನೆ ಮಾಡಿ ಅನಾರೋಗ್ಯದಿಂದ ದೂರವಿರಿ

ಹಾಸ್ಟೆಲ್ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಹಲವರು ಸುರಂಗಗಳಲ್ಲಿ ರಕ್ಷಣೆ ಪಡೆದಿದ್ದರೆ, 700 ವಿದ್ಯಾರ್ಥಿಗಳು ಬಂಕರ್ ನಲ್ಲಿ ಅಡಗಿ ಕುಳಿತಿದ್ದೇವೆ. ರಾತ್ರಿಯಿಂದ ಊಟ, ತಿಂಡಿ, ನೀರು ಕೂಡ ಇಲ್ಲದೇ ಪರದಾಡುತ್ತಿದ್ದೇವೆ. ಭಾರತ ಸರ್ಕಾರ ನಮ್ಮನ್ನು ತಕ್ಷಣ ರಕ್ಷಣೆ ಮಾಡದಿದ್ದರೆ ಇಲ್ಲಿಯೇ ನಾವು ಸಾಯಬೇಕಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಸುಮಾರು 14 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದು, ಅದರಲ್ಲಿ ರಾಯಚೂರು ಮೂಲದ 6 ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...