alex Certify BIG NEWS: ನನಗೆ ಮಾತ್ರವಲ್ಲ, ರಾಮದಾಸ್ ಗೆ ಟಿಕೆಟ್ ತಪ್ಪಿಸಿದ್ದೂ ಅವರೇ; ಜಗದೀಶ್ ಶೆಟ್ಟರ್ ಮತ್ತೊಂದು ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನನಗೆ ಮಾತ್ರವಲ್ಲ, ರಾಮದಾಸ್ ಗೆ ಟಿಕೆಟ್ ತಪ್ಪಿಸಿದ್ದೂ ಅವರೇ; ಜಗದೀಶ್ ಶೆಟ್ಟರ್ ಮತ್ತೊಂದು ಆರೋಪ

ಹುಬ್ಬಳ್ಳಿ: ನಾವು ಕಟ್ಟಿ ಬೆಳೆಸಿದ ಬಿಜೆಪಿ ನಮ್ಮ ಕಣ್ಣಮುಂದೆಯೇ ಹಾಳಾಗುತ್ತಿದೆ. ನನಗೆ ಮಾತ್ರವಲ್ಲ ಎಸ್.ಎ.ರಾಮದಾಸ್ ಅವರಿಗೂ ಟಿಕೆಟ್ ಕೈತಪ್ಪಿಸಿದ್ದು ಬಿ.ಎಲ್.ಸಂತೋಷ್ ಅವರೇ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್ ಸ್ಪರ್ಧೆ ಮಾಡಿದರೆ ಗೆಲ್ಲುತ್ತಿದ್ದರು. ಆದರೆ ಎಸ್.ಎ.ರಾಮದಾಸ್ ಅವರು ಬಿ.ಎಲ್.ಸಂತೋಷ್ ಅವರ ಆಪ್ತರಲ್ಲ, ಹಾಗಾಗಿ ರಾಮದಾಸ್ ಅವರಿಗೆ ಬಿ.ಎಲ್.ಸಂತೋಷ್ ಟಿಕೆಟ್ ಕೈತಪ್ಪಿಸಿದ್ದಾರೆ ಎಂದರು.

ಇನ್ನು ಕೋರ್ ಕಮಿಟಿಯಲ್ಲಿ ನಳೀನ್ ಕುಮಾರ್ ಕಟೀಲು ಹೆಸರು ಸೇರಿಸಿದ್ದೇ ಸಂತೋಷ್. ಕಟೀಲು ಅವಧಿ ಮುಗಿದಿದ್ದರೂ ರಾಜ್ಯ ಬಿಜೆಪಿಗೆ ಅಧ್ಯಕ್ಷರ ನೇಮಕ ಮಾಡಿಲ್ಲ, ಬಿ.ಎಲ್.ಸಂತೋಷ್ ಹೇಳಿದಂತೆ ಕಟೀಲು ಕೇಳ್ತಾರೆ. ಕಟೀಲ್ ಮಾತನಾಡಿದ್ದ ಆಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಬಿಎಸ್ ವೈ ಕಾಲ ಮುಗೀತು, ಈಶ್ವರಪ್ಪ, ಶೆಟ್ಟರ್ ಮುಗಿಸ್ತೀವಿ ಎಂದಿದ್ದರು ಎಂದು ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...