alex Certify BIG NEWS: ಡಿ.ಕೆ.ಶಿವಕುಮಾರ್ ತಲೆ ತಿರುಗಿ ಮಾತನಾಡ್ತಿದ್ದಾರೆ: BSY ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿ.ಕೆ.ಶಿವಕುಮಾರ್ ತಲೆ ತಿರುಗಿ ಮಾತನಾಡ್ತಿದ್ದಾರೆ: BSY ವಾಗ್ದಾಳಿ

ಮಂಡ್ಯ: ವೋಟರ್ ಐಡಿ ಹಗರಣ ಮುಚ್ಚಿ ಹಾಕಲು ಬಿಜೆಪಿ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಬಳಸಿಕೊಂಡಿತು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ನಾಯಕರು ಮುಗಿಬಿದ್ದು ವಾಗ್ದಳಿ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಗೆ ತಾನೇನು ಮಾತನಾಡ್ತಿದಿನಿ ಎಂದು ಅವರಿಗೇ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಡಿಕೆಶಿ ತಲೆ ತಿರುಗಿದವರಂತೆ ಮಾತನಾಡ್ತಿದ್ದಾರೆ. ಏನ್ ಮಾತಾಡಬೇಕು ಅಂತಾ ಡಿಕೆಶಿಗೆ ಗೊತ್ತಾಗ್ತಿಲ್ಲ. ಯಾರ ಪರ ಮಾತನಾಡಬೇಕು ಅನ್ನೋ ಪ್ರಜ್ಞೆ ಇಲ್ಲ. ಡಿಕೆಶಿ ಮಾತು ಅವರಿಗೇ ತಿರುಗುಬಾಣವಾಗುತ್ತಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ರೀತಿ ಮಾತುಗಳನ್ನು ಅವರಿಂದ ನಿರೀಕ್ಷಿಸಿರಲಿಲ್ಲ. ಇಂತಹ ಮಾತುಗಳಿಂದ ಅವರ ಗೌರವವೇ ಹಾಳಾಗುತ್ತದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...