alex Certify BIG NEWS: ಜೂನ್ ಅಂತ್ಯದ ವೇಳೆಗೆ ತಾರಕಕ್ಕೇರಲಿರುವ ಕೋವಿಡ್ ಕೇಸ್; 4ನೇ ಅಲೆ ಅಲ್ಪ ಪ್ರಮಾಣದಲ್ಲಿ ಆರಂಭ ಎಂದ ಆರೋಗ್ಯ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜೂನ್ ಅಂತ್ಯದ ವೇಳೆಗೆ ತಾರಕಕ್ಕೇರಲಿರುವ ಕೋವಿಡ್ ಕೇಸ್; 4ನೇ ಅಲೆ ಅಲ್ಪ ಪ್ರಮಾಣದಲ್ಲಿ ಆರಂಭ ಎಂದ ಆರೋಗ್ಯ ಸಚಿವ

ಬೆಂಗಳೂರು: ದೇಶಾದ್ಯಂತ ಕೋವಿಡ್ ಕೇಸ್ ಹೆಚ್ಚುತ್ತಿದ್ದು, ನಾಲ್ಕನೇ ಅಲೆ ಭೀತಿ ಆರಂಭವಾಗಿದೆ. ರಾಜ್ಯದಲ್ಲಿ ನಾಲ್ಕನೇ ಅಲೆ ಬಂದಿದೆ ಎಂದು ಅಧಿಕೃತವಾಗಿ ಹೇಳಲಾಗದು. ಈಗಾಗಲೇ ಅಲ್ಪ ಪ್ರಮಾಣದಲ್ಲಿ 4ನೇ ಅಲೆ ಆರಂಭವಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, 4ನೇ ಅಲೆ ಬಗ್ಗೆ ಇನ್ನೆರಡು ದಿನದಲ್ಲಿ ವರದಿ ಬರಲಿದೆ. ಜೂನ್ ಅಂತ್ಯದ ವೇಳೆಗೆ ಕೋವಿಡ್ ಕೇಸ್ ತೀವ್ರವಾಗಿ ಹೆಚ್ಚಲಿದೆ. ಈಗಾಗಲೇ IIT ಕಾನ್ಪುರ ಅಂಕಿಅಂಶಗಳನ್ನು ಕೊಟ್ಟಿದ್ದಾರೆ. ಅವರ ವರದಿ ಪ್ರಕಾರ ಜೂನ್ ಅಂತ್ಯಕ್ಕೆ ಕೋವಿಡ್ ಹೆಚ್ಚಳವಾಗುತ್ತೆ. ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಸೋಂಕು ಹೆಚ್ಚಿರುತ್ತದೆ. ಕಳೆದ ಮೂರು ಅಲೆಗಳಲ್ಲಿ IIT ಕಾನ್ಪುರ ವರದಿ ಸರಿಯಾಗಿದೆ ಎಂದು ಹೇಳಿದರು.

90ರ ದಶಕದ ಬರ್ತ್ ಡೇ ಪಾರ್ಟಿಯಲ್ಲಿ ಏನು ತಿಂಡಿಯಿರುತ್ತಿತ್ತು ಗೊತ್ತಾ..? ಐಎಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ ಇಂಟ್ರೆಸ್ಟಿಂಗ್ ಚಿತ್ರಣ

ಕೋವಿಡ್ ನಾಲ್ಕನೇ ಅಲೆಯಲ್ಲಿ ಶಾಲೆಗಳನ್ನು ಮತ್ತೆ ಬಂದ್ ಮಾಡಲಾಗುತ್ತದೆಯೇ ಎಂಬ ಸುದ್ದಿಗಾರರ ಪ್ರೆಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್ ನೊಂದಿಗೆ ಬದುಕುವ ವಿಧಾನ ಕಲಿಯಬೇಕು. ವೈಜ್ಞಾನಿಕವಾಗಿ ಹೇಗೆ ಬದುಕಬೇಕು ಎಂಬುದು ಕೋವಿಡ್ ನಿಂದ ಕಲಿಯಬಹುದಾಗಿದೆ. ಜನರು ಸಾಮಾಜಿಕ ಅಂತರ ಮಾಸ್ಕ್ ಕಡ್ಡಾಯವಾಗಿ ಪಾಲನೆ ಮಾಡಬೇಕು. ಮುಂಜಾಗೃತಾ ಕ್ರಮ ಅಗತ್ಯ. ಶಾಲೆಗಳನ್ನು ಮತ್ತೆ ಬಂದ್ ಮಾಡುವ ಯಾವುದೇ ವಿಚಾರ ಸಧ್ಯಕ್ಕಿಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...