alex Certify BIG NEWS: ಕಾಂಗ್ರೆಸ್ ವಿರುದ್ಧ ಮತ್ತೆ GLB ಅಸ್ತ್ರ ಪ್ರಯೋಗಿಸಿದ ಸಚಿವ ಸುಧಾಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ವಿರುದ್ಧ ಮತ್ತೆ GLB ಅಸ್ತ್ರ ಪ್ರಯೋಗಿಸಿದ ಸಚಿವ ಸುಧಾಕರ್

ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ, ಪರೀಕ್ಷೆ ಹೆಚ್ಚಿಸಲು ಕ್ರಮ: ಡಾ.ಸುಧಾಕರ್- Kannada Prabha

ಬೆಂಗಳೂರು: ಆರೋಗ್ಯ ಸಚಿವ ಡಾ. ಸುಧಾಕರ್ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಜಿ ಎಲ್ ಬಿ ಅಸ್ತ್ರ ಮುಂದುವರೆಸಿದ್ದಾರೆ. ಕಾಂಗ್ರೆಸ್ ನವರಿಗೆ ಗೌಡ-ಲಿಂಗಾಯತ-ಬ್ರಾಹ್ಮಣರೇ ಟಾರ್ಗೆಟ್ ಎಂದು ಕಿಡಿಕಾರಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಚಿವ ಸುಧಾಕರ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಿದ್ದರಾಮಣ್ಣನಷ್ಟು ಬುದ್ಧಿವಂತ ಅಲ್ಲ, ಆದರೆ ಪ್ರಧಾನಿ ಸೀಟ್ ನಿಂದ ದೇವೇಗೌಡರನ್ನು ಕೆಳಗಿಳಿಸಿದ್ದು ಕಾಂಗ್ರೆಸ್. ದೇವೇಗೌಡರು ರಷ್ಯಾದಲ್ಲಿದ್ದಾಗ ಪ್ರಧಾನಿ ಹುದ್ದೆಯಿಂದ ಕಾಂಗ್ರೆಸ್ ನವರು ಅವರನ್ನು ಕೆಳಗಿಳಿಸಿದರು. 26 ವರ್ಷ ಆಯ್ತು ದೇವೇಗೌಡರನ್ನು ಇಳಿಸಿದ್ದಕ್ಕೆ ಕಾರಣವಿಲ್ಲ ಎಂದು ಗುಡುಗಿದ್ದಾರೆ.

ಪಿ.ವಿ. ನರಸಿಂಹರಾವ್ ಗೆ ಕಾಂಗ್ರೆಸ್ ನವರು ಏನು ಮಾಡಿದ್ರು ? ಬಿ.ಎಸ್.ಯಡಿಯೂರಪ್ಪ ಅವರಿಗೆ ಇವರು ಏನು ಮಾಡಿದ್ರು ? ರಾಜಶೇಖರ ಮೂರ್ತಿಗೆ ಏನು ಮಾಡಿದ್ರು ? ಕಾಂಗ್ರೆಸ್ ನಾಯಕರು ಈ ಎಲ್ಲದರ ಬಗ್ಗೆ ಉತ್ತರ ಕೊಡಲಿ. ಮೇಜರ್ ಕಮ್ಯೂನಿಟಿಯವರು ಸಿಎಂ ಇದ್ದರೆ ಕಾಂಗ್ರೆಸ್ ಗೆ ಟಾರ್ಗೆಟ್. ಮೇಲ್ವರ್ಗದ ನಾಯಕರನ್ನು ಹಣಿಯುವುದೇ ಕಾಂಗ್ರೆಸ್ ಸಂಪ್ರದಾಯ. ಸಿಎಂ ಬೊಮ್ಮಾಯಿ ಸಮರ್ಥರಿದ್ದಾರೆ ಎಂದು ಕಾಂಗ್ರೆಸ್ ಟಾರ್ಗೆಟ್ ಮಾಡಿದೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂದು ಹೀಗೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...