alex Certify BIG NEWS: ಕಾಂಗ್ರೆಸ್ ಕೂಡ ಸಿಎಂ ಯಡಿಯೂರಪ್ಪ ಪರವಾಗಿದೆ; ‘ಕೈ’ ನಾಯಕನಿಂದ BSY ಪರ ಬ್ಯಾಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ಕೂಡ ಸಿಎಂ ಯಡಿಯೂರಪ್ಪ ಪರವಾಗಿದೆ; ‘ಕೈ’ ನಾಯಕನಿಂದ BSY ಪರ ಬ್ಯಾಟಿಂಗ್

ತುಮಕೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಬಿ.ಎಸ್.ಯಡಿಯೂರಪ್ಪನವರೇ ಸಿಎಂ ಆಗಿದ್ದರೆ ಕಾಂಗ್ರೆಸ್ ಗೆ ಒಳ್ಳೆಯದು. ಕಾಂಗ್ರೆಸ್ ನವರು ಕೂಡ ಯಡಿಯೂರಪ್ಪ ಪರವಾಗಿದ್ದಾರೆ ಎಂದು ಹೇಳಿದ್ದಾರೆ.

ಗುಜರಿ ಸಾಮಗ್ರಿ ಬಳಸಿ ವೆಂಟಿಲೇಟರ್​ ರೂಪಿಸಿದ ದಿನಗೂಲಿ ಕಾರ್ಮಿಕನ ಪುತ್ರ..!

ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ಯಡಿಯೂರಪ್ಪನವರು ನಾಮ್ ಕೆ ವಾಸ್ತೆ ಸಿಎಂ ಅಷ್ಟೇ. ಎಲ್ಲವನ್ನೂ ನಡೆಸುವುದು ವಿಜಯೇಂದ್ರನೇ. ವಿಜಯೇಂದ್ರನೇ ಸರ್ಕಾರ, ವಿಜಯೇಂದ್ರನೇ ಸಿಎಂ ಎಂಬಂತಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರೆ ಕಾಂಗ್ರೆಸ್ ಪಕ್ಷಕ್ಕೂ ಹೆಚ್ಚು ಲಾಭ ಎಂದರು.

ಮದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಮಹಿಳೆ ಕ್ಯಾಮರಾ ಕಂಡ ಕೂಡಲೇ ಮಾಡಿದ್ದೇನು ಗೊತ್ತಾ…?

ಇನ್ನು ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ಅವರನ್ನು ಬದಲಾಯಿಸುವುದು ಸರಿಯಲ್ಲ. ಸಿಎಂ ಬದಲಾವಣೆ ಮಾಡುವುದು ಬಿಡುವುದು ಬಿಜೆಪಿ ಪಕ್ಷದ ವಿಚಾರ. ಸುಭದ್ರ ಸರ್ಕಾರ ಇದ್ದರೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತೆ. ಜನರಿಗೂ ಸಹಾಯವಾಗುತ್ತೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...