alex Certify BIG NEWS: ಒಬ್ಬ ಸಂಸದನಾಗಿ ಸಾಮಾನ್ಯ ಜ್ಞಾನವೂ ಇಲ್ಲ; ಅಧಿಕಾರಿಗಳು ವಿನ್ಯಾಸ ಮಾಡುವಾಗ ಏನ್ ಮಾಡ್ತಿದ್ದರು ? ಪ್ರತಾಪ್ ಸಿಂಹ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಬ್ಬ ಸಂಸದನಾಗಿ ಸಾಮಾನ್ಯ ಜ್ಞಾನವೂ ಇಲ್ಲ; ಅಧಿಕಾರಿಗಳು ವಿನ್ಯಾಸ ಮಾಡುವಾಗ ಏನ್ ಮಾಡ್ತಿದ್ದರು ? ಪ್ರತಾಪ್ ಸಿಂಹ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ತೆರವುಗೊಳಿಸುವಂತೆ ಸಂಸದ ಪ್ರತಾಪ್ ಸಿಂಹ ಜಿಲ್ಲಾಡಳಿತಕ್ಕೆ ಗಡವು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಒಬ್ಬ ಸಂಸದನಿಗೆ ಸಾಮಾನ್ಯ ಜ್ಞಾನ ಇಲ್ಲ ಎಂದರೆ ಏನು ಹೇಳುವುದು ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗುಂಬಜ್ ಒಡೆಯುತ್ತೇನೆ ಅನ್ನೋದಕ್ಕೆ ಪ್ರತಾಪ್ ಸಿಂಹ ಯಾರು ? ಅವರ ಮನೆಯಿಂದ ದುಡ್ಡು ಹಾಕಿ ಬಸ್ ನಿಲ್ದಾಣ ಮಾಡಿದ್ದಾರಾ ? ಅಧಿಕಾರಿಗಳು ವಿನ್ಯಾಸ ಮಾಡುವಾಗ ಏನು ಮಾಡುತ್ತಿದ್ದರು ? ಈಗ ಗುಂಬಜ್ ಮಾದರಿಯ ಬಸ್ ನಿಲ್ದಾಣ ಒಡೆಯುತ್ತೇನೆ ಎಂದರೆ ಏನರ್ಥ ?ಎಂದು ಪ್ರಶ್ನಿಸಿದ್ದಾರೆ.

ಅಶಾಂತಿ ನಿರ್ಮಿಸಲು ಪ್ರತಾಪ್ ಸಿಂಹ ಈ ರೀತಿ ಮಾತನಾಡುತ್ತಿದ್ದಾರೆ. ಅಧಿಕಾರಿಗಳು ಪ್ಲಾನ್ ಮಾಡಿ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಓರ್ವ ಸಂಸದನಾಗಿ ಜ್ಞಾನವಿಲ್ಲವೆಂದರೆ ಹೇಗೆ ? ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...